ಚಿಕ್ಕಮಗಳೂರು: ಪರಿಶಿಷ್ಟ ಪಂಗಡ ಸಮುದಾಯದವನ್ನು ತಳಮಟ್ಟದಿಂದ ಎತ್ತಿಹಿಡಿದು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಬಲಿಷ್ಟಗೊಳಿಸುವ ಮೂಲಕ ಜನಾಂಗದ ಬೆಳವಣಿಗೆಗೆ ಪಕ್ಷವು ನಿರಂತರವಾಗಿ ಸ್ಪಂದಿಸುತ್ತಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ನಗರದ ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ ಜಿಲ್ಲಾ ಎಸ್.ಟಿ. ಮೋರ್ಚಾ ಘಟಕದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಪರಿಶಿಷ್ಟ ಪಂಗಡಗಳ ಮುನ್ನೆಡೆ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ರಾಷ್ಟ್ರಪತಿ ಹುದ್ದೆಯನ್ನು ಹಿಂದುಳಿದ ವರ್ಗದ ಮಹಿಳೆಗೆ ಕಲ್ಪಿಸಿ ಸಮುದಾಯಕ್ಕೆ ಬಿಜೆಪಿ ಕೊಡುಗೆ ಏನೆಂದು ತಕ್ಕ ಉತ್ತರ ನೀಡಿರುವುದು ಬಿಜೆಪಿ. ಅದಲ್ಲದೇ ಮದಕರಿ ನಾಯಕ, ಓನಕೆ ಓಬವ್ವ, ಬಿಸ್ಸಾ ಮುಂಡ, ವಾಲ್ಮೀಕಿ ಸೇರಿದಂತೆ ಜನಾಂಗದ ಮಹಾಪುರುಷರ ಜಯಂತಿಗೆ ಅಡಿಪಾಯ ಹಾಕಿರುವುದು ಭಾರತೀಯ ಜನತಾ ಪಾರ್ಟಿ ಎಂದು ಬಣ್ಣಿಸಿದರು.
ಬಹುತೇಕ ಪರಿಶಿಷ್ಟ ಜಾತಿ, ಪಂಗಡಕ್ಕೆ ಗುರುತಿಸಿ ಪ್ರೋತ್ಸಾಹಿಸಿರುವ ಬಿಜೆಪಿಗೆ ಮುಂದಿನ ಚುನಾವಣೆಯ ಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸ ನಿಮ್ಮಿಂದಾಗಬೇಕಿದೆ. ದೇಶದ ರಕ್ಷಣೆ ಹಾಗೂ ಭದ್ರತೆ ಹಿತದೃಷ್ಟಿಯಿಂದ ಒಂದು ಹೆಜ್ಜೆ ಮುಂದಿಟ್ಟು ನೀವು ಸೇರಿದಂತೆ ನಿಮ್ಮವರನ್ನು ಮನವರಿಸಿ ನರೇಂದ್ರ ಮೋದಿಗೆ ಮತ್ತೊಮ್ಮೆ ಪ್ರಧಾನಿ ಯಾಗಿಸಲು ನಿರ್ಭೀತರಾಗಿ ಕೈಜೋಡಿಸಬೇಕು ಎಂದರು.
ಮಾಜಿ ಗೃಹ ಸಚಿವ ಆರಗಜ್ಞಾನೇಂದ್ರ ಮಾತನಾಡಿ ಬಡವರು ಹಾಗೂ ಹಿಂದುಳಿದ ವರ್ಗದವರು ಚಿಕಿತ್ಸಾ ಸಮಯದಲ್ಲಿ ಹೆಚ್ಚು ಹಣಕಾಸು ಕಟ್ಟಲಾಗದೇ ಸಾವೇ ಕೊನೆಯಘಟ್ಟ ಅಂದುಕೊಂಡಿದ್ದರು. ಆದರೆ ಕೇಂದ್ರ ಸರ್ಕಾ ರ ದೇಶದ ಪ್ರಜೆಗಳಿಗೆ ೫ ಲಕ್ಷ ರೂ. ಇನ್ಸೂರೆನ್ಸ್ ಕಲ್ಪಿಸುವ ಮೂಲಕ ಬದುಕಲು ಅವಕಾಶ ಮಾಡಿಕೊಟ್ಟವರನ್ನು ಸ್ಮರಿಸಬೇಕು ಎಂದರು.
ಕೇಂದ್ರ ಸರ್ಕಾರದ ಜನಪರ ಯೋಜನೆಗಳು ದೇಶದ ಪ್ರತಿಯೊಂದು ಸಮಾಜಕ್ಕೆ ಸರ್ವಸಮಾನವಾಗಿ ಒದಗಿಸುತ್ತಿದೆ. ಮೋದಿ ಗ್ಯಾರಂಟಿಗಳೇ ಮುಂದಿನ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಸಾಧ್ಯ. ಹೀಗಾಗಿ ಕಾ ರ್ಯಕರ್ತರು ಎಚ್ಚೆತ್ತುಕೊಂಡು ಲೋಕಸಭಾ ಸಮರದಲ್ಲಿ ಯಾವುದೇ ಆಮಿಷಗಳಿಗೆ ಒಳಗಾಗದೇ ದೇಶದ ಬೆಳವ ಣಿಗೆ ಕಾರ್ಯೋನ್ಮುಖರಾಗಿ ದುಡಿಯಬೇಕು ಎಂದು ಸಲಹೆ ಮಾಡಿದರು.
ರಾಜ್ಯ ಎಸ್.ಟಿ. ಮೋರ್ಚಾ ಘಟಕದ ಅಧ್ಯಕ್ಷ ಬಂಗಾರು ಹನುಮಂತು ಮಾತನಾಡಿ ರಾಜ್ಯಾದ್ಯಂತ ಅತ್ಯಂತ ಹಿಂದುಳಿದ ಸಮುದಾಯಕ್ಕೆ ರಾಜಕೀಯವಾಗಿ ಶಕ್ತಿ ತುಂಬಿದ ಪಕ್ಷ ಬಿಜೆಪಿ. ಸರ್ಕಾರ ರಚನೆಗೊಂಡ ಪ್ರತಿ ಸಾರಿಯು ಒಂದಲ್ಲೊಂದು ಯೋಜನೆಗಳನ್ನು ಜನಾಂಗಕ್ಕೆ ರೂಪಿಸಿ ಏಳಿಗೆಗೆ ಸಹಕರಿಸುತ್ತಿರುವುದು ಮರೆಯಲಾಗದ ವಿಷಯ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಗ್ಯಾರಂಟಿ, ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಮಾಜಿ ಶಾಸಕ ಸಿ.ಟಿ.ರವಿಯವರ ಜನಾಂಗದ ಮೇಲಿನ ಸಹಕಾರದಿಂದ ಇಂದು ಉನ್ನತ ಹುದ್ದೆ ಅಲಂಕರಿಸಲು ಕಾರಣವಾಗಿದೆ. ಕ್ಷೇತ್ರದಲ್ಲೂ ವಾಲ್ಮೀಕಿ ಭವನ ನಿರ್ಮಿಸಿ ಸಮುದಾಯಕ್ಕೆ ಪೂರಕವಾಗಿರುವ ರವಿ ಯವರ ಕಾಳಜಿ ಅವಿಸ್ಮರಣೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಟಿ. ಮೋರ್ಚಾ ಘಟಕದ ಜಿಲ್ಲಾಧ್ಯಕ್ಷ ನಂದೀಶ್ ಮದಕರಿ ಪರಿಶಿಷ್ಟ ಜನಾಂಗದ ಮಹಾಪುರುಷರ ಹಿನ್ನೆಲೆಯನ್ನು ಅರಿತು ರಾಜ್ಯದಲ್ಲಿ ಅಧಿಕೃತ ಆಚರಣೆಗೆ ಸ್ಪಂದಿಸಿದ ಬಿಜೆಪಿಗೆ ಬೆಂಬಲಿಸಬೇಕು. ಜಿಲ್ಲೆಯ ಜನಾಂಗಕ್ಕೂ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಲು ಸಹಕರಿಸಿರುವ ಅನುಕೂಲ ಮಾಡಿಕೊಟ್ಟಿರುವ ಮುಖಂಡರುಗಳಿಗೆ ಕೃತಜ್ಞತೆ ಸಲ್ಲಿಸಿದರು.
ಇದೇ ವೇಳೆ ಎಸ್.ಟಿ.ಮೋರ್ಚಾ ಜಿಲ್ಲಾಧ್ಯಕ್ಷ ನಂದೀಶ್ ಮದಕರಿ ಅವರಿಗೆ ರಾಜ್ಯಾಧ್ಯಕ್ಷ ಬಂಗಾರ ಹನು ಮಂತ ಪಕ್ಷದ ಬಾವುಟವನ್ನು ನೀಡುವ ಮೂಲಕ ಜವಾಬ್ದಾರಿಯನ್ನು ವಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಡಾ. ನರೇಂದ್ರ, ರಾಜ್ಯ ಎಸ್.ಟಿ. ಮೋರ್ಚಾ ಘಟಕದ ಉಪಾಧ್ಯಕ್ಷರಾದ ಗೋಪಾಲಕೃಷ್ಣ, ಅನಿಲ್ಕುಮಾರ್, ಕಾರ್ಯಕಾರಣಿ ಸಮಿತಿ ಸದಸ್ಯ ರಾಜು ಆಗರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎಂ.ಮಧುಕುಮಾರ್, ಎಂ.ಟಿ.ಶಂಕರ್, ಕಾರ್ಯದರ್ಶಿ ನಾಗರಾಜು, ನಗರಾಧ್ಯಕ್ಷ ಪ್ರದೀಪ್, ಮುಖಂಡರುಗಳಾದ ದೀಪಕ್ದೊಡ್ಡಯ್ಯ, ಸುನೀಲ್, ಜಗ ದೀಶ್, ಜ್ಞಾನಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
Inaugurate the Convention before the Scheduled Tribes