ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಮುಡ ಹಗರಣದಲ್ಲಿ ಭಾರೀ ಭ್ರಷ್ಟಚಾರವೆಸಗಿ ಸತ್ಯಾಂಶ ಬಯಲಾದರೂ ರಾಜೀನಾಮೆ ಸಲ್ಲಿಸದಿರುವ ವಿರುದ್ಧ ಬಿಜೆಪಿ ನಗರ ಘಟ ಕವು ಪಕ್ಷದ ಕಚೇರಿಯಿಂದ ಆಜಾದ್ಪಾರ್ಕ್ ವೃತ್ತದವರೆಗೆ ಸೋಮವಾರ ಜಾಥಾ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ಶೆಟ್ಟಿ ಸಮಾಜವಾದಿ, ಅಹಿಂದಾವಾದಿ ಎಂಬ ಮುಖವಾಡ ಧರಿಸಿ ಕೋಟಿಗಟ್ಟಲೇ ಹಣವನ್ನು ಲೂಟಿವೆಸಗುತ್ತಿರುವ ಮುಖ್ಯಮಂತ್ರಿಗಳು ಜನತೆಯ ಕಣ್ಣಿಗೆ ಮಂಕುಬೂದಿ ಎರಚಿ ರಾಜಕೀಯ ನಾಟಕದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯನವರ ಭಾರೀ ಭ್ರಷ್ಟಚಾರ ಬಯಲಾಗಿ ರಾಜ್ಯಪಾಲರು ಪ್ರಾಸಿಕ್ಯೂಟರ್ ಆದೇಶಿದ್ದರೂ ಮುಖ್ಯಮಂತ್ರಿ ಸ್ಥಾನ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದ್ದಾರೆ. ಕುರ್ಚಿ ಆಸೆ ಹಾಗೂ ಹಗರಣಗಳ ಸರಮಾಲೆ ಹಾಕಿಕೊಂಡ ಮುಖ್ಯಮಂತ್ರಿಗಳು ಪರಿಶಿಷ್ಟ ಹಣಕ್ಕೆ ಕನ್ನಹಾಕಿ ಜನತೆಗೆ ವಿಷಉಣಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷವು ಸಂವಿಧಾನದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರೆ ನೈತಿಕವಾಗಿ ಸಿ.ಎಂ. ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಪ್ರಕರಣ ಎದುಸುವಂತಾಗಲಿ ಎಂದ ಅವರು ಹಿಂದೆ ಜೆಡಿಎಸ್ ಹಾಗೂ ಬಿಜೆಪಿ ನಾಯ ಕರ ವಿರುದ್ಧ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಲಿ ಎಂದಿದ್ದವರು ಇದೀಗ ಅವರ ಸ್ಥಾನಕ್ಕೆ ಕುತ್ತು ಸಂಭ ವಿಸಿದಾಗ ರಾಜಕೀಯ ದೊಂಬರಾಟ ಮಾಡುತ್ತಿದ್ದಾರೆ ಎಂದು ದೂರಿದರು.
ಸಿದ್ದರಾಮಯ್ಯ ಅನೇಕ ದಶಕಗಳ ಕಾಲ ರಾಜಕೀಯದಲ್ಲಿ ತೊಡಗಿಸಿಕೊಂಡ ಕಾರಣ ಸ್ಥಾನಕ್ಕೆ ಗೌರ ವಿಸಿ ರಾಜೀನಾಮೆ ಸಲ್ಲಿಸಬೇಕು. ಇದನ್ನು ಮೀರಿ ಬಂಡತನದಿಂದ ಮುಂದುವರೆದ್ದಲ್ಲಿ ಕಾನೂನಿನ ಪ್ರಕಾರ ಬಂಧನಕ್ಕೆ ಒಳಪಡಿಸುವ ಕಾಲ ಸನ್ನಿಹಿತವಾಗಲಿದ್ದು ಕೂಡಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ದಿನಂಪ್ರತಿ ರಾಜ್ಯಾದ್ಯಂತ ಬಿಜೆಪಿ ಹೋರಾಟ ರೂಪಿಸಲಿದೆ ಎಂದು ಎಚ್ಚರಿಸಿದರು.
ಬಿಜೆಪಿ ನಗರ ಘಟಕ ಅಧ್ಯಕ್ಷ ಕೆ.ಎಸ್.ಪುಷ್ಪರಾಜ್ ಮಾತನಾಡಿ ಕಳೆದ ಅನೇಕ ದಿನಗಳಿಂದ ಪಾದ ಯಾತ್ರೆ ಕೈಗೊಂಡಿರುವ ರಾಜ್ಯ ಬಿಜೆಪಿ ಮುಖಂಡರುಗಳು ಸದ್ಯದಲ್ಲೇ ಮೈಸೂರು ತಲುಪಲಿದೆ. ಹೀಗಾಗಿ ಭ್ರಷ್ಟಚಾರ ಹಣೆಪಟ್ಟಿ ಹೊತ್ತಿರುವ ಮುಖ್ಯಮಂತ್ರಿಗಳು ಸ್ಥಾನ ಕಳೆದುಕೊಳ್ಳುವ ಮುನ್ನವೇ ಪದತ್ಯಾಗ ಗೊಳಿಸಿ ಸಂವಿಧಾನಕ್ಕೆ ಗೌರವ ಸಲ್ಲಿಸಬೇಕು ಎಂದರು.
ಅಹಿಂದಾ, ಬಡವರು, ದೀನದಲಿತರ ಉದ್ದಾರವೆಂಬ ಸಿದ್ದರಾಮಯ್ಯವರು ನಾಟಕೀಯ ಮುಖವಾ ಡ ಕಳಚಿಬಿದ್ದಿದೆ. ಸಿ.ಎಂ. ಸ್ಥಾನಕ್ಕೆ ಮರ್ಯಾದೆ, ಗೌರವದಿಂದ ರಾಜೀನಾಮೆ ಸಲ್ಲಿಸಬೇಕು. ಅತಿಆಸೆಯಿಂದ ಕುರ್ಚಿಗೆ ಅಂಟಿಕೊಂಡರೆ ಕಾನೂನು ಕಟ್ಟಳೇ ಮುಖಾಂತರ ಸ್ಥಾನದಿಂದ ಕೆಳಗಿಳಿಸಬೇಕಾಗುತ್ತದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ವಕ್ತಾರ ಸಿ.ಹೆಚ್.ಲೋಕೇಶ್ ಮಾತನಾಡಿ ಬಡವರು, ದೀನದಲಿತರ ಅಭಿವೃಧ್ದಿ ಒತ್ತು ಕೊಡುವನೆಂಬ ಮಾತು ನೀಡಿ ಪರಿಶಿಷ್ಟ ಜಾತಿ, ಪಂಗಡದ ಕೋಟ್ಯಾಂತರ ಹಣವನ್ನು ನೆರೆ ರಾಜ್ಯದ ಚುನಾ ವಣೆ ಹಾಗೂ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದೆ. ಈ ನಡುವೆ ಮುಡ ಹಗರಣದಲ್ಲಿ ಹಣವನ್ನು ಲೂಟಿವೆಸಗಿರುವುದು ಸಾಬೀತಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಜಸಂತಾ ಅನಿಲ್ಕುಮಾರ್, ನಗರ ಅಧ್ಯಕ್ಷೆ ಪವಿತ್ರ ಮಧುಬಂಡಿ, ಜಿಲ್ಲಾ ಉಪಾಧ್ಯಕ್ಷ ಪ್ರೇಮ್ಕುಮಾರ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ಓಬಿಸಿ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ಪ್ರೇಮ್ಕುಮಾರ್, ವಕ್ತಾರ ಹಿರೇಮಗಳೂರು ಪುಟ್ಟ ಸ್ವಾಮಿ, ಮುಖಂಡರುಗಳಾದ ಕೌಶಿಕ್, ಬಸವರಾಜ್, ಜಯವರ್ಧನ್, ಸೋಮಶೇಖರ್, ನವೀನ್ ಮತ್ತಿ ತರರು ಹಾಜರಿದ್ದರು.
BJP protests against Mysore Muda Neveshan scam