ಮೂಡಿಗೆರೆ: ಭಗವತ್ಪಾದರು ಹಾಕಿಕೊಟ್ಟಂತಹ ಆತ್ಮ ಪರಮಾತ್ಮರ ಮದ್ಯೆ ಇರುವಂತಹ ವೇದ ಕಲ್ಪನೆ ಇದೆ. ಅದರ ಅನುಷ್ಠಾನ ಈ ಕ್ಷೇತ್ರದಲ್ಲಿ ನಡೆಯುತ್ತಿದೆ .ಸನಾತನ ಧರ್ಮದಲ್ಲಿ ನಮ್ಮ ಕ್ಷೇತ್ರಗಳು ಯಾವುದೇ ರೀತಿಯ ಜಾತಿ ಬೇದವಿಲ್ಲದೆ ಮೇಲು ಕೀಳು ಎನ್ನುವ ಬೇದವಿಲ್ಲದೆ ಬಡವ ಬಲ್ಲಿದ ಎನ್ನುವ ಬೇದವಿಲ್ಲದೆ ನಮ್ಮ ಸಮಾಜ ಒಟ್ಟಾಗುವ ಕೇಂದ್ರ ಧಾರ್ಮಿಕ ಕೇಂದ್ರಗಳು ಎಂದು ಜಗದ್ಗುರು ಶ್ರೀಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠ ಕಾಸರಗೋಡು ಇಲ್ಲಿಯ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡಿದರು.
ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಮಂಗಳವಾರ ಶ್ರೀ ಲಲಿತ ಕಲಾಮಂಟಪದಲ್ಲಿ ನಡೆದ ಶ್ರೀಶರನ್ನವರಾತ್ರಾ ಮಹೋತ್ಸವದ ಜೀವ-ಭಾವ ಶ್ರೀ ನವಗ್ರಹ ಹೋಮ ಮತ್ತು ಧರ್ಮಕರ್ತರ ೩೪ನೇ ವರ್ಷದ ಪಟ್ಟಾಭಿಷೇಕೋತ್ಸವ ಕಾರ್ಯಕ್ರಮದ ದಿವ್ಯ ಸಾನೀಧ್ಯ ವಹಿಸಿ ಮಾತನಾಡಿದ ಅವರು ಆತ್ಮದಲ್ಲಿ ಪರಮಾತ್ಮನನ್ನು ಕಂಡಾಗ ಇನ್ನೊಬ್ಬರ ಕಷ್ಟ ನಮ್ಮ ಕಷ್ಟ ಎನ್ನುವುದ ಭಾಸವಾಗುತ್ತದೆ ಆದ್ದರಿಂದ ಬಹಳಷ್ಟು ಸಾಮಾಜಿಕ ಕಾರ್ಯಗಳು ಕ್ಷೇತ್ರದಲ್ಲಿ ನಡೆಯಲು ಕಾರಣವಾಗುತ್ತದೆ ಎಂದು ಹೇಳಿದರು.
ವಿಶ್ವವಾಣಿ ಪತ್ರಿಕೆ ಸಂಪಾಧಕ ವಿಶ್ವೇಶ್ವರ ಭಟ್ ಮಾತನಾಡುತ್ತಾ ಯಾವುದೇ ಒಂದು ಕ್ಷೇತ್ರ ಅದಕ್ಕೆ ತನ್ನದೇ ಆದಂತಹ ತಾಯಿಯ ಆಶೀರ್ವಾದ ಅನುಗ್ರಹ ಇರುತ್ತದೆ. ಇದರ ಜೊತೆಗೆ ಆ ಕ್ಷೇತ್ರಕ್ಕೆ ಧೀಮಂತವಾದ ನಾಯಕತ್ವ ಇರುತ್ತದೆ ಯಾವ ಕೇತ್ರದಲ್ಲಿ ಅಲ್ಲಿ ಪರಂಪರೆ ಹಾಗು ಅನುಗ್ರದ ಜೊತೆಗೆ ಧಾರ್ಮಿಕ ನಾಯಕತ್ವ ಎಲ್ಲಿ ಸಿಗುತ್ತೋ ಆ ಕ್ಷೇತ್ರ ಸಹಜವಾಗಿ ಅಭಿವೃದ್ಧಿಗೆ ತೊಡಗಿಸಿಕೊಳ್ಳುತ್ತದೆ.ಭೀಮೇಶ್ವರ ಜೋಷಿ ಕ್ಷೇತ್ರಕ್ಕೆ ನಾಯಕತ್ವ ಕೊಡುವುದರ ಜೊತೆಗೆ ಸಾಮಾಜಕ್ಕೂ ನಾಯಕತ್ವವನ್ನು ಕೊಟ್ಟಿದ್ದಾರೆ.ಸಂಸ್ಕಾರಯುತ ವ್ಯಕ್ತಿಗೆ ಜೀವ ಮಾತ್ರ ಮುಖ್ಯವಲ್ಲ ಭಾವ ಮಾತೃಹೃದಯ ಬೇಕು.ಕ್ಷೇತ್ರದ ನಾಯಕತ್ವ ಯಾರು ವಹಿಸಿಕೊಳ್ಳುತ್ತಾರೋ ಅವರಿಗೆ ಮಾತೃಹೃದಯ ಅಗತ್ಯ ಇದೆ ಅದನ್ನು ಈ ಕ್ಷೇತ್ರದಲ್ಲಿ ಕಾಣಬಹುದು ಎಂದು ಹೇಳಿದರು.
ಹೊರನಾಡು ದೇವಸ್ಥಾನದ ಧರ್ಮಕರ್ತರಾದ ಜಿ.ಭೀಮೇಶ್ವರ ಜೋಷಿ ಮಾತನಾಡಿ ಉತ್ತರ ಭಾರತ ಪ್ರವಾಸ ಮಾಡಿದ ಸಂದರ್ಭದಲ್ಲಿ ಅಲ್ಲಿ ನೋಡಿದ ಅನುಭವ ನನಗೆ ಈ ಜೀವ_ಭಾವ ಕಾರ್ಯಕ್ರಮ ಮಾಡಲು ಪ್ರೇರಣೆಯಾಯಿತು. ದೇಹದ ಹೊರಭಾಗವನ್ನು ನಾವು ಎಷ್ಟು ಶುದ್ಧವಾಗಿಟ್ಟುಕೊಳ್ಳು ತ್ತೇವೇಯೋ ಹಾಗೆಯೇ ಅಂತರಂಗದ ಭಾವನೆಯನ್ನು ಶುದ್ಧವಾಗಿಟ್ಟುಕೊಳ್ಳಬೇಕು.ಯಾವತ್ತು ಭಾವ ಕೆಡುವಂತ ವ್ಯವಸ್ಥೆಗೆ ಕಾರಣವಾಗುತ್ತದೋ ಅದರಿಂದ ಬದುಕು ಕಷ್ಟ ಕಾರ್ಪಣ್ಯಕ್ಕೆ ಒಳಗಾಗುತ್ತದೆ. ಭಾವನಾತ್ಮಕವಾಗಿ ನಮ್ಮ ಬದುಕನ್ನು ಸೃಜನಶೀಲವನ್ನಾಗಿ ಮಾಡಿಕೊಳ್ಳಬೇಕು.ಅಂತರಂಗದ ಶುದ್ಧತೆಯಲ್ಲಿ ನಮ್ಮ ಜೀವನ ಸಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜ್ಞಾನೇಶ್ವರೀ ಜನಸೇವಾ ಟ್ರಸ್ಟ್(ರಿ.) ಜೀವನ ಸಂಜೆ ವೃದ್ಧಾಶ್ರಮ ಶಿವಮೊಗ್ಗ ಇವರಿಗೆ ಒಂದು ಲಕ್ಷ ರೂ ಸಹಿತ ಶ್ರೀ ಮಾತಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದ ಮೊದಲು ಬೆಳಿಗ್ಗೆ ಪಟ್ಟಾಭಿಷೇಕ ಮಹೋತ್ಸವದ ದಿನದ ಅಂಗವಾಗಿ ಧರ್ಮಕರ್ತರಿಂದ ಶ್ರೀ ಮಾತೆಗೆ ಅಭಿಷೇಕ ಮತ್ತು ವಿಶೇಷ ಪೂಜೆ ಮತ್ತು ಶ್ರೀ ಕ್ಷೇತ್ರದಲ್ಲಿ ಸಪ್ತಶತಿ ಪಾರಾಯಣ, ನಾಲ್ಕುವೇದ ಪಾರಾಯಣ, ಸುಂದರಕಾಂಡ ಪಾರಾಯಣ, ಶ್ರೀ ದೇವಿಭಾಗವತಾ ಪಾರಾಯಣ, ಕುಂಕುಮಾರ್ಚನೆ ಮತ್ತು ಸಪರಿವಾರ ದೇವರುಗಳಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.
ಹೊರನಾಡು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಜಿ.ರಾಮನಾರಾಯಣ ಜೋಷಿ, ಟ್ರಸ್ಟಿಗಳಾದ ರಾಜಲಕ್ಷ್ಮೀ ಭೀ ಜೋಷಿ, ಗಿರಿಜಾಶಂಕರ ಜೋಷಿ, ಜ್ಞಾನೇಶ್ವರೀ ಜನಸೇವಾ ಟ್ರಸ್ಟ್(ರಿ.) ಜೀವನ ಸಂಜೆ ವೃದ್ಧಾಶ್ರಮದ ಅಧ್ಯಕ್ಷ ಎಂ.ಹಾಲಪ್ಪ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಸುಧೀರ್ ಭಟ್ ಪೆರ್ಡೂರು ಮತ್ತು ಬಳಗದವರಿಂದ ಚಂದ್ರಾವಳಿ ವಿಲಾಸ ಎಂಬ ಯಕ್ಷಗಾನ ಪ್ರಸಂಗ ನಡೆಯಿತು.
Difficulty is felt when you see God in your soul