ಚಿಕ್ಕಮಗಳೂರು: ಕ್ರಿಸ್ಮಸ್ ಪ್ರಯುಕ್ತ ಬ್ಲಾಸಮ್ ರೆಸಾರ್ಟ್ನಲ್ಲಿ ಕ್ರಿಸ್ಮಸ್ ಕೇಕ್ ಮಿಶ್ರಣ ಮಾಡಲಾಗಿದೆ, ಡಿಸಂಬರ್ ೨೫ ರ ಕ್ರಿಸ್ಮ್ಸ್ಗೆ ೧೫೦ ಕೆ.ಜಿ ರುಚಿ ಭರಿತ ಕೇಕ್ ತಯರಿಸಲು ಮುಂದಾಗಿದೆ. ಅದಕ್ಕೆ ಬೇಕಾಗುವ ಒಣ ದ್ರಾಕ್ಷಿ, ಗೋಡಂಬಿ,ಚೇರಿಗೆ ಶುದ್ಧ ವೈನ್, ರಮ ಮಿಶ್ರಣ ಮಡುವ (ಮೆರಿ ಮಿಕ್ಸಿಂಗ್) ಕಾರ್ಯ ಆಹ್ವಾನಿತ ಅತಿಥಿಗಳಿಂದ ನಡೆಯಿತು.
ಬಂದ ಅತಿಥಿಗಳನ್ನು ಬ್ಲಾಸಮ್ ರೆಸಾರ್ಟ್ನ ಮಾಲೀಕರಾದ ಮಂಜುನಾಥ್ ಬಾಲಕೃಷ್ಣ ಮತ್ತು ನಿತಿನ್ ಮತ್ತು ವ್ಯವಸ್ಥಾಪಕರಾದ ನಂಜಪ್ಪ ರವರು ಆತ್ಮೀಯವಾಗಿ ಬರಮಡಿಕೊಂಡರೆ, ಸಾಲಂಕೃತ ಸಾಲು ಹಣತೆ ಎಲ್ಲರ ಗಮನ ಸೆಳೆದವು.
ಬ್ಲಾಸಮ್ ರೆಸಾರ್ಟ್ನ ಮಾಲೀಕರಾದ ಮಂಜುನಾಥ್ ರವರು ಮಾಹಿತಿ ನೀಡಿ ಕೇಕ್ ತಯರಿಕೆಗೆ ೧.೫ ತಿಂಗಳಿನಿಂದಲೇ ತಯರಿ ಮಡಿಕೊಳ್ಳಬೇಕಾಗುತ್ತದೆ. ಒಣದ್ರಾಕ್ಷಿ, ಗೋಡಂಬಿ, ಚೆರಿಗಳನ್ನು ವೈನ್, ರಮ ಜೊತೆ ಮಿಶ್ರಣ ಮಡಿ ೧೫ ದಿನಗಳ ಕಾಲ ಇಟ್ಟು ಸಂಸ್ಕರಿಸಿ ಮತ್ತೊಮ್ಮೆ ಮಿಶ್ರಣ ಮಡಿ ರುಚಿಕರ ಕೇಕ್ ಸಿದ್ಧಪಡಿಸಲಾಗುತ್ತದೆ. ೧೫ ಕೆ.ಜಿ.ಒಣ ಹಣ್ಣುಗಳನ್ನು ಬಳಸಲಾಗಿದೆ ಎಂದು ತಿಳಿಸಿದರು.
ಕರಾವಳಿ ಪ್ರದೇಶದಲ್ಲಿ ಕೇಕ್ ತಯರಿ ಸಾಂಪ್ರದಾಯಿಕ ವಿಷಯವಾಗಿದ್ದು, ಕಾಪಿsಯ ನಾಡಿನಲ್ಲೂ ತೃತೀಯ ಬಾರಿಗೆ ಪ್ರಂಗ ಮಡಲಾಗಿದೆ ಎಂದು ಹೇಳಿದರು.ಕ್ರಿಸ್ಮಸ್ ದಿನ ಕೇಕ್ ಕತ್ತರಿಸುವ ಮೂಲಕ ಅತಿಥಿಗಳ ಸಮ್ಮುಖದಲ್ಲಿ ಹೊಸ ವರ್ಷದ ಸಂಭ್ರಮಚರಣೆ ನಡೆಯಲಿದೆ ಎಂದರು ಈ ಸಂದರ್ಭದಲ್ಲಿ ಸೆಫ್ ಸತೀಶ್, ಯೋಗೇಶ್, ಸಲ್ಮಾ, ಅತಿಥಿಗಳು ಮತ್ತಿತರರು ಉಪಸ್ಥಿತರಿದ್ದರು.
Preparation of Christmas cake for New Year celebration