ಚಿಕ್ಕಮಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷರು ಅಪಪ್ರಚಾರ, ಅಕ್ರಮ, ವಾಮಮಾರ್ಗಗಳ ಮೂಲಕ ನಾಲ್ಕನೇ ಬಾರಿ ಚುನಾವಣೆಯಲ್ಲಿ ಗೆಲ್ಲಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಅಧ್ಯಕ್ಷಿಯ ಅಭ್ಯರ್ಥಿ ಜಿಲ್ಲಾಧಿಕಾರಿಗಳ ಕಚೇರಿ ಶಿರಸ್ತೆದಾರ್ ಹೇಮಂತ್ ಕುಮಾರ್ ಆರೋಪಿಸಿದರು.
ನಗರದಲ್ಲಿಂದು ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದಅವರು ಡಿ.೪ರಂದು ಅಧ್ಯಕ್ಷ ಸ್ಥಾನಕ್ಕೆ ಹೇಮಂತ್ ಕುಮಾರ್ ಆದ ನಾನು ಖಜಾಂಚಿ ಸ್ಥಾನಕ್ಕೆ ಕೃಷ್ಣಮೂರ್ತಿ ಅರಸ್,ಮತ್ತು ರಾಜ್ಯಸಮಿತಿ ಸದಸ್ಯತ್ವದ ಸ್ಥಾನಕ್ಕೆ ಮಂಜುನಾಥ್ ಸ್ಪರ್ಧಿಸಿದ್ದೇವೆ ಎಂದರು.
ನಿರ್ದೇಶಕರ ಚುನಾವನೆ ಸಂದರ್ಭದಲ್ಲಿ ಬೈಲಾನಿಯಮಗಳನ್ನು ಗಾಳಿಗೆ ತೂರಿದ್ದಾರೆ, ಮತದಾರಪಟ್ಟಿ ತಯಾರಿಸುವಾಗಲೂ ಸದಸ್ಯರಿಗೆ ಯಾವುದೇ ಮಾಹಿತಿ ನೀಡದೆ ಆರೋಗ್ಯ ಇಲಾಖೆ , ಗ್ರಂಥಾಲಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ೭೦ಕ್ಕೂ ಹೆಚ್ಚು ನೌಕರರ ಹೆಸರುಗಳನ್ನು ಕೈಬಿಟ್ಟು ಮತದಾರರ ಪಟ್ಟಿತಯಾರಿಸಿ ಅಕ್ರಮವೆಸಗಿದ್ದಾರೆ ಈಬಗ್ಗೆ ರಾಜ್ಯಾಧ್ಯಕ್ಷರ ಗಮನಕ್ಕೂ ತರಲಾಗಿದೆ ಎಂದರು.
ದೇವೇಂದ್ರರವರ ಅವಧಿಯಲ್ಲಿ ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಸದಸ್ಯರಿಂದ ಸಂಗ್ರಹಗೊಂಡ ಶುಲ್ಕದ ಬಗ್ಗೆ ,ಬಿಡುಗಡೆಯಾದವ ಸರ್ಕಾರ ಅನುದಾನಗಳ ಖರ್ಚುವೆಚ್ಚದ ಬಗ್ಗೆ ಈವರೆಗೂ ಮಾಹಿತಿ ನೀಡಿಲ್ಲಾ.ಅವರ ಅಕ್ರಮಗಳನ್ನು ಪ್ರಶ್ನಿಸಿದರೆಂಬ ಕಾರಣಕ್ಕೆ ಶಾಸಕರು, ಜನಪ್ರತಿನಿಧಿಗಳ ಮೇಲೆ ಆಣೆ ಪ್ರಮಾಣದ ಆರೋಪ ಹೊರಿಸುತ್ತಿದ್ದಾರೆ.ಇದು ಸತ್ಯಕ್ಕೆ ದೂರವಾದ ವಿಚಾರ ಎಂದು ಸ್ಪಷ್ಟನೆ ನೀಡಿದರು. ನಮ್ಮತಂಡಕ್ಕೆ ಸದಸ್ಯರು ಅವಕಾಶ ನೀಡಿದರೆ ಅಪೂರ್ಣವಾಗಿರುವ ನೌಕರ ಸಮುದಾಯ ಭವನವನ್ನು ಪೂರ್ಣಗೊಳಿಸುವುದಾಗಿ ತಿಳಿಸಿದರು.
ಮಂಜುನಾಥ್ ಮಾತನಾಡಿ ಚುನಾವಣೆಯ ಪೂರ್ವದಿಂದಲೇ ವಿರೋಧಿ ಅಭ್ಯರ್ಥಿಗಳ್ಯಾರು ಸ್ಪರ್ಧಿಸಲು ಅವಕಾಶ ನೀಡ ಬಾರದೆಂದು ನಿರ್ಧರಿಸಿದ್ದ ಅಧ್ಯಕ್ಷ ದೇವೆಂದ್ರರವರು ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಹಲವರನ್ನು ಅನರ್ಹಗೊಳಿಸುವ ಹುನ್ನಾರ ನಡೆಸಿದ್ದರುಎಂದು ಆರೋಪಿಸಿದರು.
ಕಿರಣ್ ಕುಮಾರ್ ಮಾತನಾಡಿ ನಮ್ಮಹೋರಾಟ ಮತದಾರರ ಪಟ್ಟಿಯ ತಯಾರಿಕೆಯಲ್ಲಿ ಕ್ರಮವೆಸಗಿರುವ ನಿರಂಕುಶವಾದಿಗಳ ವಿರುದ್ದ,ನೌಕರರ ಹಿತಕಾಯುವಲ್ಲಿ ವಿಫಲರಾಗಿರುವ,ಸಂಘಟನೆ ಒಡೆಯಲು ಹುನ್ನಾರ ನಡೆಸಿದ,ಪ್ರತಿಭಟನೆಗಳನ್ನು ದುರ್ಭಲ ಗೊಳಿಸುವ ಕುತಂತ್ರನಡೆಸಿದ ಅಧ್ಯಕ್ಷ ದೇವೇಂದ್ರ ಮತ್ತು ಅವರ ತಂಡದ ವಿರುದ್ದ ಎಂದು ಹೇಳಿದರು.
ಈಗೋಷ್ಟಿಯಲ್ಲಿ ಮಂಜುನಾಥ್, ಗ್ರಂತಾಲಯ ಇಲಾಖೆ ಸತೀಶ್ ಇದ್ದರು.
Government Employees Association President’s plan to win elections through leftist means