ಚಿಕ್ಕಮಗಳೂರು: ಶಿಲ್ಪಕಲೆಗೆ ಅಮರಶಿಲ್ಪಿ ಜಕಣಾಚಾರಿ ನೀಡಿರುವ ಕೊಡುಗೆ ಅಗಾಧ ವಾಗಿವೆ. ಬೇಲೂರು, ಹಳೇಬೀಡು ಹಾಗೂ ಸೋಮನಾಥಪುರ ದೇವಾಲಯಗಳಲ್ಲಿನ ಶಿಲ್ಪಕಲೆ ವಿಶ್ವಕರ್ಮರ ಪ್ರಸ್ತುತತೆಯನ್ನು ಎತ್ತಿಹಿಡಿದಿದೆ ಎಂದು ಸಾಮಾಜಿಕ ಚಿಂತಕ ಬಿ.ಪಿ.ರತೀಶ್ಆಚಾರ್ಯ ಹೇಳಿದರು.
ನಗರದ ಕುವೆಂಪು ಕಲಾಮಂದಿರದ ಹೇಮಾಂಗಣ ಸಭಾಂಗಣದಲ್ಲಿ ಬುಧವಾರ ಅಮರಶಿಲ್ಪಿ ಜಕಣ ಚಾರಿ ಸಂಸ್ಮರಣಾ ದಿಣಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸ ನೀಡಿ ಅವರು ಮಾತನಾಡಿ ಸದಾಕಾಲಕ್ಕೂ ಜೀವಂತವಾಗಿರುವ ಭಾರತೀಯ ಶಿಲ್ಪಕಲಾ ಕೌಶಲ್ಯಕ್ಕೆ ಅಮರಶಿಲ್ಪಿ ಜಕಣಾಚಾರಿಯವ ರು ಅಪಾರ ಕೊಡುಗೆ ನೀಡಿರುವ ಕಾರಣ ಇಂದಿಗೂ ಶಿಲ್ಪಕಲೆಗಳು ಜೀವಂತವಾಗಿದೆ. ಇಂದು ವಿಶ್ವವಿಖ್ಯಾತ ಶಿಲ್ಪಿಯ ಸಂಸ್ಮರಣೆ ಎಲ್ಲೆಡೆ ನಡೆಯುತ್ತಿದೆ. ವಿಶ್ವಕರ್ಮರನ್ನು ವಿಶ್ವರೂಪ, ಜಕಣಾಚಾರ್ಯ ಎಂಬ ವಿವಿಧ ಹೆಸರುಗಳಿಂದ ಗುರುತಿಸಲಾಗುತ್ತಿದೆ ಎಂದರು.
ಸೃಷ್ಟಿಯ ಮೂಲಕತೃವಾಗಿರುವ ಜಕಣಾಚಾರಿಯರ ಶಿಲ್ಪಕಲಾ ಕುಶಲತೆ ಇಂದು ಜಗತ್ತಿನ ಎಲ್ಲೆಡೆ ಪಸ ರಿಸಿದೆ. ಪ್ರಪಂಚದ ಎಲ್ಲ ವಿದ್ಯೆಗಳ ಮೂಲವಾಗಿರುವ ಜಕಣಚಾರಿ ಅವರನ್ನು ಜಗತ್ತಿನ ಮೊದಲ ಮುಖ್ಯ ಇಂಜಿನಿಯರ್ ಎನ್ನಬಹುದು. ಜಕಣಚಾರಿಯವರು ಸಾಮಾನ್ಯ ಜನರಿಗೆ ದೇವರ ಪರಿಕಲ್ಪನೆ ನೀಡುವ ಮಧ್ಯ ಸ್ಥಿಕೆದಾರರಾಗಿದ್ದರು ಎಂದು ಹೇಳಿದರು.
ಶಿಲ್ಪಕಲೆಯಲ್ಲಿ ಶ್ರೀಮಂತ ಪರಂಪರೆ ಹೊಂದಿರುವ ವಿಶ್ಚಕರ್ಮ ಸಮುದಾಯ ತಮ್ಮ ಕುಲಕುಸುಬುಗಳ ಜೊತೆಗೆ ಶಿಕ್ಷಣ ಪಡೆದು ಸಂಘಟಿತರಾಗಬೇಕು. ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬರಬೇಕು. ಅಲ್ಲದೇ ಸಮು ದಾಯ ಇತರರಲ್ಲೂ ಜಾಗೃತಿ ಮೂಡಿಸಿ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ವಿಶ್ವಬ್ರಾಹ್ಮಣ ಸಮಾಜ ಸೇವಾಸಭಾದ ಅಧ್ಯಕ್ಷ ಹೆಚ್. ಆರ್.ಉಮಾಶಂಕರ್ ವಿಶ್ವಕರ್ಮರ ಕೊಡುಗೆಗಳು ಯಾವುದೇ ಒಂದು ಧರ್ಮ, ಜಾತಿ, ಕುಲಕ್ಕೆ ಸೀಮಿತ ವಾಗಿಲ್ಲ. ಸಮಾಜವು ಪಂಚಕಸಬುಗಳ ಮುಖಾಂತರ ಸಾವಿರಾರು ವ?ಗಳ ಇತಿಹಾಸಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಜಕಣಚಾರ್ಯರು ಉತ್ತಮ ಕಲಾಕೃತಿಗಳನ್ನು ನಿರ್ಮಿಸಿ ನಾಡಿನ ಅಲಂಕರ ಹೆಚ್ಚಿಸಿದ್ದಾರೆ. ಅವರ ಪರಿ ಶ್ರಮದ ಫಲವಾಗಿ ನಾಡಿನಾದ್ಯಂತ ಕಟ್ಟಿಗೆ, ಕಲ್ಲು ಬಂಡೆಗಳಿಂದ ತಯಾರಿಸಿದ ಶಿಲ್ಪಕಲೆ ಹಾಗೂ ಕಲಾ ಕೃತಿ ಗಳನ್ನು ವೀಕ್ಷಿಸಲು ದೇಶ-ವಿದೇಶಗಳಿಂದ ಯಾತ್ರಿಕರು ಆಗಮಿಸುವಂತೆ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎಸ್.ಕೆ.ಶಂಕರಯ್ಯಚಾರ್, ಮಹಿಳಾ ಸಂಘದ ಅಧ್ಯಕ್ಷೆ ಮಂಜುಳಾ ಭೀಮಾಚಾರ್, ಸುವರ್ಣಗಾರರ ಕ್ಷೇಮಾಭೀವೃಧ್ದಿ ಸಂಘದ ಅಧ್ಯಕ್ಷ ಸುಧೀರ್ಕುಮಾರ್, ಮುಖಂಡರುಗಳಾದ ಚಂದ್ರಶೇಖರ್, ಜಯಣ್ಣಚಾರ್, ಜಗದೀಶ್ ಮತ್ತಿತರರಿದ್ದರು.
Amarashilpi Jakana Chari Remembrance Day Programme