ಚಿಕ್ಕಮಗಳೂರು: ಸಾಹಿತ್ಯವು ಭಾಷೆ ಸ್ವಾಧೀನವನ್ನು ಹೆಚ್ಚಿಸಿ, ವಿಮರ್ಶಾತ್ಮಕ ಚಿಂತನೆಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿ, ವೈವಿಧ್ಯಮಯ ದೃಷ್ಟಿಕೋನಗಳನ್ನು ಅನ್ವೇಷಿಸುವುದು, ಸಹನುಭೂತಿಯನ್ನು ಉತ್ತೇಜಿಸುವುದು ಹಾಗೂ ಸಾಂಸ್ಕೃತಿಕ ತಿಳುವಳಿಕೆಯನ್ನು ಬೆಳೆಸುವುದರ ಜೊತೆಗೆ ವ್ಯಕ್ತಿತ್ವ ವಿಕಸನದಲ್ಲಿ ಸಾಹಿತ್ಯಗಳ ಪಾತ್ರ ಬಹುಮುಖ್ಯವಾದುದು ಎಂದು ಎ.ಐ.ಟಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತಾಧಿಕಾರಿ ಡಾ. ಸುಬ್ಬರಾಯ ಹೇಳಿದರು.
ಅಮೃತೇಶ್ವರ ಪ್ರಕಾಶನ ಮೈಸೂರು, ನವೀನ್ ಪ್ರಕಾಶನ , ಪೂರ್ಣಿಮಾ ಪ್ರಕಾಶನ, ಬೊಂಗಾಳೆ ಪ್ರಕಾಶನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಚಿಕ್ಕಮಗಳೂರು ಇವರ ವತಿಯಿಂದ ಇಂದು ನಗರದ ಎ.ಐ.ಟಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಲಕ್ಷ್ಮೀಶಾಮರಾವ್ ಮಾಳತ್ನರ್ ಮತ್ತು ಎಸ್. ಪೂರ್ಣಿಮಾ ಬಾಬು ಶಿರಾ ಅವರ ಕೃತಿಗಳ ಬಿಡುಗಡೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಲ್ಪನೆಯನ್ನು ಉತ್ತೇಜಿಸುವುದು, ವೈಯಕ್ತಿಕ ಬೆಳವಣಿಗೆಯನ್ನು ಉತ್ತೇಜಿಸುವುದು, ಮನರಂಜನೆಯನ್ನು ನೀಡುವುದು, ಮತ್ತು ಪ್ರೀತಿ, ನ್ಯಾಯ, ಬೋಧನೆ; ಇವೆಲ್ಲವನ್ನೂ ಸಾಹಿತ್ಯ ಕೃತಿಗಳನ್ನು ಓದುವ ಮೂಲಕ ಮತ್ತ? ಶೋಧಿಸಬಹುದು ಮತ್ತು ಆಳಗೊಳಿಸಬಹುದು ಎಂದರು
ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ ಗಿರಿಜಾಶಂಕರ್ ಕೃತಿಗಳ ವಿಮರ್ಶಿಸಿ ಮಾತನಾಡಿ ಸಾಹಿತ್ಯಗಳು ಸಾಮಾಜಿಕ ತುಮುಲಗಳನ್ನು ಹೊರಹಾಕುತ್ತವೆ. ಅಪ್ರಬುದ್ಧತೆಯಿಂದ ಹೊರಬರಲು ಸಹಕರಿಸುತ್ತವೆ. ಕನ್ನಡ ಸಾಹಿತ್ಯವು ಕನ್ನಡ ಭಾಷೆಯಲ್ಲಿನ ವಿಶಾಲವಾದ ಲಿಖಿತ ಕೃತಿಗಳನ್ನು ಒಳಗೊಂಡಿದೆ, ಕಾವ್ಯ ಮತ್ತು ನಾಟಕಗಳಂತಹ ವೈವಿಧ್ಯಮಯ ಪ್ರಕಾರಗಳ ಮೂಲಕ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ, ಕವಿಗಳು, ತತ್ವಜ್ಞಾನಿಗಳು ಮತ್ತು ಸರ್ವಜ್ಞ ವಚನಕಾರು ಅಪಾರವಾದ ಕೊಡುಗೆಗಳನ್ನು ನೀಡಿದ್ದಾರೆ.
ವಚನಗಳು ಸಾಹಿತ್ಯ ಲೋಕದ ಮೂಲಗಳು. ಶಿವಶರಣರ ವಚನಗಳು ಸಾಮಾಜದಲ್ಲಿ ತಲೆದೂರಿದ್ದ ಅಸಮಾನತೆ, ಜಾತಿ ಪದ್ದತಿ, ವರ್ಣಪದ್ಧತಿಗಳಂತ ಅನೇಕ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸುವ ಕಾರ್ಯದಲ್ಲಿ ಮುಖ್ಯ ಪಾತ್ರ ವಹಿಸಿದ್ದವು. ಸಾಹಿತ್ಯದಲ್ಲಿ ಯಾವುದೇ ಮೇಲು ಕೀಳಿಲ್ಲ. ಅವುಗಳ ಅಧ್ಯಯನವು ಮನುಷ್ಯನನ್ನು ಅತ್ಯಂತ ಪ್ರಬುದ್ಧಗೊಳಿಸುತ್ತವೆ.
ಕನ್ನಡ ಸಾಹಿತ್ಯ ಕನ್ನಡ ಭಾಷೆಯ? ಪ್ರಾಚೀನ. ಅ? ವೈಭವಯುತ. ಇಡೀ ಕನ್ನಡ ಸಾಹಿತ್ಯದಲ್ಲಿ ಕನ್ನಡ ನಾಡಿನ ಕಲೆ, ಸಂಸ್ಕೃತಿ, ಬದುಕು ಹೀಗೆ ಒಟ್ಟಾರೆ ಕನ್ನಡ ಸಾಂಸ್ಕೃತಿಕ ಜಗತ್ತೇ ಅಡಕಗೊಂಡಿದೆ. ಯುವ ತಲೆಮಾರಿನ ಆಕ?ಕ ಬರಹಗಾರರವರೆಗೂ ವಿಶಿ? ಪರಂಪರೆಯನ್ನೇ ನಿರ್ಮಿಸಿದೆ. ಅಂದಿನಿಂದ ಅನೇಕ ಮಜಲುಗಳನ್ನು ದಾಟಿಕೊಂಡು ಬಂದ ಕನ್ನಡ ಸಾಹಿತ್ಯ ಭಾ?, ಸಂಸ್ಕೃತಿ, ಬದಕುಕನ್ನು ಶ್ರೀಮಂತವಾಗಿಸುವ ಜೊತೆಗೆ ವರ್ತಮಾನದ ಆಗುಹೋಗುಗಳಿಗೆ ಸ್ಪಂದಿಸುತ್ತಾ, ಸಾರ್ವಕಾಲಿಕ ಮೌಲ್ಯಗಳನ್ನು ಪ್ರತಿಪಾದಿಸುತ್ತಾ ಭೂತಕ್ಕೂ ಭವಿ?ಕ್ಕೂ ಅವಶ್ಯಕ ಮಾರ್ಗವನ್ನು ರೂಪಿಸಿದೆ.
ಅದರೇ ಇಂದಿನ ದಿನಮಾನಗಳಲ್ಲಿ ಕೆಲ ವಚನಗಳು ಸಂಕೀರ್ಣತೆಯನ್ನು ಕಳೆದುಕೊಂಡಿವೆ ಸಾಹಿತ್ಯಗಳು ವ್ಯಕ್ತಿತ್ವ ವಿಕಸನಕ್ಕೆ ಸಹಕರಿಸುತ್ತವೆ ಇವುಗಳನ್ನು ಯುವ ಜನತೆಗೆ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯ ಎಂದ ಅವರು ಕನ್ನಡ ನಾಡು ನುಡಿ ಭಾಷೆಗಳನ್ನು ಉಳಿಸಿ ಬೆಳೆಸುವಲ್ಲಿ ಕನ್ನಡ ಸಾಹಿತ್ಯದ ಪಾತ್ರ ಬಹು ಮುಖ್ಯವಾದುದು ಯುವ ಸಾಹಿತಿಗಳನ್ನು ಪ್ರತಿಯೊಬ್ಬರು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಖ್ಯಾತ ಮಕ್ಕಳ ತಜ್ಷಾ ಹಾಗೂ ಸಂಸ್ಕೃತಿ ಚಿಂತಕರಾದ ಡಾ.ಜೆ.ಪಿ ಕೃಷ್ಣೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಹಿತ್ಯ ಮನು?ನ ಬದುಕಿನ ಅನುಭವ ಲೋಕದ ಸಂಕಥನ. ಸಾಹಿತ್ಯ ಪರಂಪರೆಗೆ ಅಸಾಧಾರಣ ಶಕ್ತಿಯಿದೆ. ಅತ್ಯಂತ ದುರ್ಬಲ ಪದಪುಂಜಗಳು, ವಾಕ್ಯ ಸಮುಚ್ಛಾಯಗಳು ಸಹಸ್ರಾರು ವ?ಗಳ ಹಿಂದೆ ಬದುಕಿದ್ದ ಕವಿಯ ಅತ್ಯಂತ ಕ್ಷಣಿಕ ಭಾವಸ್ಪಂದನವನ್ನು ಅಜರಾಮರವಾಗಿ ಉಳಿಸುತ್ತವೆ. ಇತರ ಶ್ರೀಮಂತ ಜೀವಂತ ಭಾ?ಗಳಂತೆ ಕನ್ನಡ ಭಾ?ಗೂ ಕಾಲ ದೇಶ ಪರಿಸರಕ್ಕನುಗುಣವಾಗಿ ರೂಪತಳೆದ ಸತ್ವಯುತ, ಶಕ್ತಿಯುತ ಸಾಹಿತ್ಯದ ಪರಂಪರೆಯಿದೆ ಇವುಗಳನ್ನು ತಮ್ಮಲ್ಲಿ ಅಳವಡಿಸಿಕೊಂಡು ಇತರರಿಗೂ ಮಾದರಿಯಾಗಿರುವ ಯುವ ಸಾಹಿತಿಗಳನ್ನು ಗೌರವಿಸಿ ಪ್ರೋತ್ಸಾಹಿಸಬೇಕು ಎಂದರು
ಡಾ. ಅವರೆಕಾಡು ವಿಜಯ ಕುಮಾರ್ ಮಾತನಾಡಿ ಕನ್ನಡ ಸಾಹಿತ್ಯವು ಕನ್ನಡ ಭಾ?ಯಲ್ಲಿ ರಚಿಸಲಾದ ವ್ಯಾಪಕವಾದ ಕೃತಿಗಳ ಸಮೂಹವನ್ನು ಉಲ್ಲೇಖಿಸುತ್ತದೆ, ಇದು ನಾಟಕಗಳು, ಕಾವ್ಯ ಮತ್ತು ಕಥೆ ಹೇಳುವಿಕೆಯಂತಹ ವೈವಿಧ್ಯಮಯ ಪ್ರಕಾರಗಳನ್ನು ಒಳಗೊಂಡಿದೆ. ಈ ಸಾಹಿತ್ಯವು ಕರ್ನಾಟಕದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ದಾಖಲಿಸುವುದಲ್ಲದೆ, ಇದು ವಿವಿಧ ಐತಿಹಾಸಿಕ ಯುಗಗಳ ಮೂಲಕ ವಿಕಸನಗೊಂಡಿದೆ ಮತ್ತು ಅನೇಕ ಕವಿಗಳು ಮತ್ತು ತತ್ವಜ್ಞಾನಿಗಳ ಕೊಡುಗೆಗಳನ್ನು ಒಳಗೊಂಡಿದೆ ಪ್ರಸ್ತುತ ಸಮಾಜಕ್ಕೆ ಸಾಹಿತ್ಯದ ಭೋಜನವನ್ನು ಉಣಬಡಿಸುವ ಅವಶ್ಯಕತೆಯಿದೆ. ಮೊಬೈಲ್ ಲೋಕದಲ್ಲಿ ಮುಳುಗಿರುವ ಯುವ ಜನತೆಗೆ ಸಾಹಿತ್ಯದ ಮಹತ್ವವನ್ನು ತಿಳಿಸುವುದು ನಮ್ಮೆಲ್ಲರ ಜವಬ್ದಾರಿ ಎಂದು ಕೃತಿಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಕರ್, ಎ.ಐ.ಟಿ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಟಿ ಜಯದೇವ್, ಹಾಸನ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಸುಂದ್ರೇಶ್, ಸಾಹಿತಿಗಳಾದ ಲಕ್ಷ್ಮೀಶಾಮರಾವ್ ಮಾಳತ್ನರ್ ಮತ್ತು ಎಸ್. ಪೂರ್ಣಿಮಾ ಬಾಬು ಶಿರಾ ಉಪಸ್ಥಿತರಿದ್ದರು. ಮಲೆನಾಡು ಕಣ್ಮಣಿ ಪ್ರಶಸ್ತಿಯನ್ನು ಟಿ.ರಾಜಶೇಖರ್, ಬಿ.ಎಂ ರಘು, ಎಂ.ಎಸ್ ಸುಧೀರ್, ಸುಮ ಪ್ರಸಾದ್, ಕೆ.ಎಂ ಜಯ ಪ್ರಕಾಶ್, ಡಾ. ಅವರೇಕಾಳು ವಿಜಯಕುಮಾರ್, ಆರ್. ನವೀನ್ ಕುಮಾರ್ ಅವರಿಗೆ ನೀಡಲಾಯಿತು,
Book launch by Lakshmi Shamrao Malatnar and S. Purnima Babu Shira