ಚಿಕ್ಕಮಗಳೂರು: ಅಪರಾಧವನ್ನು ದ್ವೇಷಿಸಬೇಕು ಹೊರತು, ಅಪರಾಧಿಯನ್ನಲ್ಲ. ಆಕಸ್ಮಿಕವಾಗಿ ಪೆಟ್ಟು ತಿಂದು ಶಿಕ್ಷೆಗೆ ಗುರಿಯಾಗುವ ವ್ಯಕ್ತಿಗಳು, ಬಿಡುಗಡೆ ಬಳಿಕ ಸಾತ್ವಿಕ ಜೀವನದಡಿ ಬಾಳ ನ್ನು ಮುನ್ನೆಡೆಸಬೇಕು ಎಂದು ಕಸಾಪ ರಾಜ್ಯ ಪ್ರಧಾನ ಕಾರ್ಯದರ್ಶಿ ಪಟೇಲ್ ಪಾಂಡು ಹೇಳಿದರು.
ನಗರದ ಜಿಲ್ಲಾ ಕಾರಾಗೃಹದಲ್ಲಿ ಶನಿವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಮಹಿಳಾ ಘಟ ಕ, ಜಿಲ್ಲಾ ಕೇಂದ್ರ ಕಾರಾಗೃಹ, ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಸಹಯೋಗದಲ್ಲಿ ಹಮ್ಮಿ ಕೊಂಡಿದ್ಧ ಸಂಗೀತ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಆಸ್ತಿ, ಅಂತಸ್ತು ಹಾಗೂ ಹಣದ ದುರಾಸೆಗಾಗಿ ಮನುಷ್ಯ ಸನ್ನಿವೇಶನಕ್ಕೆ ಸಿಲುಕಿಕೊಂಡು ಮನಸ್ಸನ್ನು ಹತೋಟಿ ತರಲಾಗದೇ ತಪ್ಪುದಾರಿಯ ಗುಲಾಮರಾಗಿ ಬಿಡುತ್ತಾರೆ. ಹೀಗಾಗಿ ಮನಸ್ಸನ್ನು ಸ್ಥಿಮಿತಗೊಳಿಸಲು ಪುಸ್ತಕ, ಸಂಗೀತ ಹಾಗೂ ಸಾಹಿತ್ಯದ ಅಭ್ಯಾಸಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಧರ್ಮದ ದಾರಿಯಲ್ಲಿ ಸಾಗುವ ವ್ಯಕ್ತಿಗಳು ಒಂದಲ್ಲೊಂದು ದಿನ ಶಿಕ್ಷೆ ಒಳಗಾಗುವನು. ಹಾಗಾಗಿ ವಿಶ್ವ ಮಾನವ ಸಂದೇಶದಂತೆ ಮೊದಲು ಮಾನವನಾಗು ಎಂಬ ತತ್ವ, ಆಲೋಚನೆಗಳ ಮೌಲ್ಯಗಳನ್ನು ಅರ್ಥೈ ಸಿಕೊಳ್ಳಬೇಕು. ದಾರ್ಶನಿಕರ ಕೀರ್ತನೆ, ವಚನಗಳ ಓದಿನಿಂದ ಜೀವನವು ಬದಲಾವಣೆಗೆ ನಾಂದಿಯಾಗಲಿದೆ ಎಂದು ಹೇಳಿದರು.
ಆತ್ಮಶ್ರದ್ದೆ ಸಾಕ್ಷಿಕರಿಸಿದರೆ, ಅಗಾಧ ಶಕ್ತಿ ಉದ್ಬವವಾಗಲಿದೆ. ಶಕ್ತಿ ಸದ್ಬಳಕೆ ಮಾಡಿಕೊಳ್ಳದೇ, ಸನ್ನಿವೇಶಕ್ಕೆ ಬಲಿಕೊಟ್ಟರೆ, ಬಾಳೆಂಬ ಬಂಡಿಯಲ್ಲಿ ಎಡವಿ ಬೀಳುತ್ತೇನೆ. ಆಸೆಗಳು ದುರಾಸೆಗಳೆಂದು ಭಾವಿಸಿ, ಸುಖ-ದು ಃಖವನ್ನು ಸರಿಸಮಾನಾಗಿ ಅರಿತುಕೊಂಡರೆ ಜಗತ್ತಿನಲ್ಲಿ ಸುಲಭದ ಜೀವನದ ಜೊತೆಗೆ ಸಾಧನೆ ಮಾಡಬಹು ದು ಎಂದು ತಿಳಿಸಿದರು.
ಕಾರಾಬಂಧಿಗಳು ಬಂಧನದಿಂದ ಮುಕ್ತರಾಗುವ ಸನ್ನಿಹಿತಕಾಲ ಬರಲಿದೆ. ಈ ನಡುವೆ ಕವಿಸಂತರ ಕೃತಿ ಗಳು, ಗಾಂಧಿತತ್ವದ ಅಹಿಂಸಾತ್ಮಕ ಚಿಂತನೆಗಳ್ಳ ಪುಸ್ತಕಗಳನ್ನು ಓದಬೇಕು. ಮಾನವ ಜನ್ಮ ಎಂಬುದು ಬಹು ದೊಡ್ಡದು. ಹಾಳುಮಾಡಿಕೊಂಡರೆ ಕೊನೆಗಳಿಗೆಯಲ್ಲಿ ತೀವ್ರ ಹತಾಸೆಗೆ ಒಳಗಾಗಬೇಕಾಗುತ್ತದೆ. ಹಾಗಾಗಿ ಮನಸ್ಸನ್ನು ಹತೋಟಿಯಲ್ಲಿಡಲು ಸಾಹಿತ್ಯಾತ್ಮಕ ಚಟುವಟಿಕೆ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.
ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ ಸಾಹಿತ್ಯ, ಸಂಗೀತ ಮನಸ್ಸನ್ನು ಉಲ್ಲಾಸಗೊಳಿಸ ಲಿದೆ. ದಾರ್ಶನಿಕರ ಕೃತಿಗಳನ್ನು ಅಭ್ಯಾಸಿಸಿ ಇತರರಿಗೂ ತಿಳಿಸುವಂಥ ಕೆಲಸ ಮಾಡಬೇಕು. ಆದಷ್ಟು ಸಮ ಯ ಮನಸ್ಸನ್ನು ಸಂತೋಷದಿಂದ ಕಳೆಯಲು ಪ್ರಯತ್ನಿಸಬೇಕು. ಆಕಸ್ಮಿಕ ಜರುಗಿದ ಘಟನೆಗಳಿಗೆ ಶಿಕ್ಷೆ ಅನು ಭವಿಸಿ ಹೊಸಮನುಷ್ಯನಾಗಿ ಹೊರಹೊಮ್ಮಬೇಕು ಎಂದರು.
ಪೊಲೀಸ್, ಕಾರಾಗೃಹ ಸಿಬ್ಬಂದಿ ಹಾಗೂ ಕಾರಾಬಂಧಿಗಳಿಗೆ ಸಾಹಿತ್ಯಾಭಿರುಚಿ ಬೆಳೆಸಲು ಪರಿಷತ್ತಿನಿಂ ದ ಕವಿಗೋಷ್ಠಿ ಹಮ್ಮಿಕೊಳ್ಳುವ ಚಿಂತನೆಯಿದೆ, ಅಧಿಕಾರಿಗಳ ಅಪ್ಪಣೆ ಮೇರೆಗೆ ಮುಂದಿನ ದಿನದಲ್ಲಿ ಕಾರಾಗೃ ಹದಲ್ಲಿ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡು ಕವಿವೇದಿಕೆ ಸೃಷ್ಟಿಸುವ ಗುರಿಯಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾರಾಗೃಹ ಅಧೀಕ್ಷಕ ಮಂಜುನಾಥ್ ಸದ್ಯದ ಲ್ಲೇ ನಾಡಿನ ಭವ್ಯವಾದ ಹಬ್ಬ ಕನ್ನಡ ರಾಜ್ಯೋತ್ಸವ ಆಚರಿಸಲು ಕಾಲಕೂಡಿ ಬರುತ್ತಿದೆ. ಜೊತೆಗೆ ಜಿಲ್ಲಾ ಕಸಾ ಪದಿಂದ ಸಂಗೀತ ಸಂಜೆ ಏರ್ಪಡಿಸಿ ಕಾರಾಬಂಧಿಗಳಿಗೆ ಸಾಮಾಜಿಕ ಬದ್ಧತೆ ಅರಿವು ಮೂಡಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಇದೇ ವೇಳೆ ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ಹುಲಿಕೆರೆ ಪುಲಿಕೇಶಿ ಅ ವರಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ತಾಲ್ಲೂಕು ನಿಕಟಪೂರ್ವ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ಜಿಲ್ಲಾ ಕಸಾಪ ಮಹಿಳಾ ಜಿಲ್ಲಾಧ್ಯಕ್ಷೆ ನಿರ್ಮಲ ಮಂಚೇಗೌಡ, ಪ್ರಧಾನ ಕಾ ರ್ಯದರ್ಶಿ ರೂಪನಾಯ್ಕ್, ತಾಲ್ಲೂಕು ಅಧ್ಯಕ್ಷೆ ವಿಜಯಲಕ್ಷ್ಮೀ, ಕಸಬಾ ಹೋಬಳಿ ಅಧ್ಯಕ್ಷ ವೀಣಾ ಮಲ್ಲಿ ಕಾರ್ಜುನ್ ಉಪಸ್ಥಿತರಿದ್ದರು.
Crime should be hated not the criminal.