ಚಿಕ್ಕಮಗಳೂರು: ಇಂದಿನ ಯುವ ಜನತೆ ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ವಿಶ್ವಮಾನವರಾಗಬೇಕು ಎಂದು ಆಶಾಕಿರಣ ಅಂಧಮಕ್ಕಳ ಶಾಲೆಯ ಅಧ್ಯಕ್ಷ ಡಾ.ಜೆ.ಪಿ. ಕೃಷ್ಣೆಗೌಡ ಸಲಹೆ ಮಾಡಿದರು.
ನಗರದ ಐಡಿಎಸ್ಜಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಪ್ರಥಮ ವ?ದ ವಿದ್ಯಾರ್ಥಿಗಳು ಅಂತಿಮ ವ?ದ ವಿದ್ಯಾರ್ಥಿಗಳಿಗೆ ಮಂಗಳವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿಂದು ಮಾನವೀಯ ಮೌಲ್ಯಗಳ ಕೊರತೆಯಿದೆ, ಅದರಿಂದಾಗಿ ದೌರ್ಜನ್ಯ, ಶೋ?ಣೆ, ಅತ್ಯಾಚಾರ, ಕೊಲೆ ಸೇರಿದಂತೆ ಅಪರಾಧ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ, ಎಲ್ಲೆಡೆ ಅಭದ್ರತೆ, ಅಶಾಂತಿ ಕಾಡುತ್ತಿದೆ ಎಂದು ವಿ?ದಿಸಿದ ಅವರು ಈ ಪರಿಸ್ಥಿತಿ ಸರಿ ಹೋಗಬೇಕಾದರೆ ಯುವಜನತೆ ಭಕ್ತಿ ಭಂಡಾರಿ ಬಸವಣ್ಣನವರ ಸಪ್ತ ಸೂತ್ರಗಳನ್ನು ಮೈಗೂಡಿಸಿಕೊಳ್ಳಬೇಕು, ರಾ?ಕವಿ ಕುವೆಂಪು ಅವರ ಆಶಯದಂತೆ ವಿಶ್ವಮಾನವರಾಗಲು ಪ್ರಯತ್ನಿಸಬೇಕು ಎಂದು ಕಿವಿ ಮಾತು ಹೇಳಿದರು.
ಯುವಜನತೆ ಪ್ರತಿದಿನ ಪತ್ರಿಕೆಗಳನ್ನು ಓದಬೇಕು,, ಆ ಮೂಲಕ ಜಗತ್ತಿನ ಆಗು ಹೋಗುಗಳನ್ನು ತಿಳಿಯಬೇಕು, ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಳ್ಳಬೇಕು, ಆರೋಗ್ಯ ಮತ್ತು ವಿದ್ಯೆ ಒಂದೇ ನಾಣ್ಯದ ಎರಡು ಮುಖಗಳಾಗಿವೆ, ಹಾಗಾಗಿ ವಿದ್ಯಾರ್ಥಿಗಳು ಆರೋಗ್ಯವಂತರು ಮತ್ತು ವಿದ್ಯಾವಂತರೂ ಆಗಬೇಕು ಎಂದರು.
ನಾವು ಸಮಾಜಮುಖಿಗಳಾದರೆ, ಸಮಾಜದ ಸೇವೆ ಮಾಡಿದರೆ, ಜನಮಾನಸದಲ್ಲಿ ಚಿರಸ್ಥಾಯಿಗಳಾಗಬಹುದು, ಸಮಾಜ ಸೇವೆಯಿಂದ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ, ಹಾಗಾಗಿ ಯುವಜನತೆ ಸಮಾಜಮುಖಿಗಳಾಗಬೇಕು ಎಂದು ಹೇಳಿದರು.
ಡಾ.ವ? ಅಭಿ?ಕ್ ಮಾತನಾಡಿ ವಿದ್ಯಾರ್ಥಿ ಜೀವನ ಬಂಗಾರದ ಜೀವನ, ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು, ಉನ್ನತವಾದ ಕನಸುಗಳನ್ನು ಕಾಣಬೇಕು, ಅವುಗಳ ನನಸಿಗಾಗಿ ಶ್ರಮಿಸಬೇಕು, ಶಿಕ್ಷಣವಂತರು ದೇಶಕ್ಕಾಗಿ, ಸಮಾಜಕ್ಕಾಗಿ ದುಡಿಯಬೇಕು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಕೆ.ಎನ್. ಲಕ್ಷ್ಮಿಕಾಂತ್ ೨೦೦೮ರಲ್ಲಿ ಕಾಲೇಜಿನಲ್ಲಿ ಆರಂಭಗೊಂಡ ಸ್ನಾತಕೋತ್ತರ ಕೇಂದ್ರ ಇದುವರೆಗೆ ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದೆ ಎಂದು ತಿಳಿಸಿದರು.
ನಾವು ಗಳಿಸಿದ ಪದವಿಗಳು, ನಾವು ಪಡೆದ ವಿದ್ಯೆ ಸಾರ್ಥಕವಾಗಬೇಕಾದರೆ ನಾವು ಸಮಾಜಮುಖಿಗಳಾಗಬೇಕು, ವಿದ್ಯಾರ್ಥಿಗಳು ತಾವು ಕಲಿತ ವಿದ್ಯೆಯನ್ನು ಇತರರಿಗೆ ಹಂಚಬೇಕು, ಉತ್ತಮ ನಾಗರೀಕರಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯೆ ಡಾ. ಆರ್.ಎ. ಪು? ಭಾರತಿ ವಿದ್ಯಾರ್ಥಿಗಳು ದುರಭ್ಯಾಸಗಳಿಂದ ದೂರವಿರಬೇಕು, ಹೆತ್ತವರು, ಗುರುಗಳು ಮತ್ತು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಬೇಕು, ಪಡೆದ ಪದವಿಯನ್ನು, ವಿದ್ಯೆಯನ್ನು ಸಮಾಜಕ್ಕಾಗಿ ಬಳಸಬೇಕು ಎಂದು ಕಿವಿ ಮಾತು ಹೇಳಿದರು.
ಅಂತಿಮ ವ?ದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ನೆನಪಿನ ಕಾಣಿಕೆ ನೀಡಲಾಯಿತು, ಅಂತಿಮ ವ?ದ ವಿದ್ಯಾರ್ಥಿಗಳು ತಮ್ಮ ಕಲಿಕೆ ಅವಧಿಯ ಅನುಭವಗಳನ್ನು ವಿವರಿಸಿದರು, ಆಶಾಕಿರಣ ಅಂದ ಮಕ್ಕಳ ಶಾಲೆಯ ಅಧ್ಯಕ್ಷ ಡಾ.ಜೆ.ಪಿ. ಕೃ?ಗೌಡ ಮತ್ತು ಅವರ ಪುತ್ರಿ ಡಾ. ವ? ಅಭಿ?ಕ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಸಹ ಪ್ರಾಧ್ಯಾಪಕರಾದ ಪ್ರೊ. ಎಂ. ತ್ರಿಪುರ ಮಹೇಶ್ವರ, ಡಾ. ಎಸ್. ಮಹೇಶ್, ಉಪನ್ಯಾಸಕರಾದ ಕೆ.ಸಿ. ಆಶಾ, ದೇವಾನಂದ್, ದಿನೇಶ್, ಬಸವರಾಜ್, ಲೋಕೇಶ್, ರಾಘವೇಂದ್ರ, ವಿದ್ಯಾರ್ಥಿಗಳಾದ ಎಂ.ಕೆ. ಭವಾನಿ, ಅಸ್ಮಬಾನು ಉಪಸ್ಥಿತರಿದ್ದರು.
The youth should become universal human beings as the national poet Kuvempu wished.