ಚಿಕ್ಕಮಗಳೂರು: ರೆಸಾರ್ಟ್ನಲ್ಲಿ ಯಾವುದೇ ರಾಜಕೀಯ ನಡೆದಿಲ್ಲ. ರಾಜಕೀಯ ಮಾತನಾಡೋಕೆ ಇಲ್ಲಿಗೆ ಬರಬೇಕಿಲ್ಲ. ಬೆಂಗಳೂರಿನಲ್ಲೇ ಮಾತನಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮುಳ್ಳಯ್ಯಗನಗಿರಿ ಸಮೀಪದ ಪ್ರೈಂರೋಸ್ ರೆಸಾರ್ಟ್ನಲ್ಲಿ ಶನಿವಾರ ಮಾಜಿ ಉಪಮುಖ್ಯಮಂತ್ರಿ ಆರ್.ಆಶೋಕ್ ಅವರ ಹುಟ್ಟುಹಬ್ಬದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ವಿಧಾನಸಭೆ ವಿರೋಧಪಕ್ಷದ ನಾಯಕನ ಆಯ್ಕೆ ಬಗ್ಗೆ ನಾಳೆ ಸಂಜೆ ಒಳಗಾಗಿ ಗೊತ್ತಾಗಲಿದೆ. ಅಧಿವೇಶನದಲ್ಲಿ ಚರ್ಚಿಸಲು ಸಾಕಷ್ಟು ವಿಷಯಗಳಿವೆ. ಸರ್ಕಾರ ಬಂದು ಒಂದೂವರೆ ತಿಂಗಳಲ್ಲಿ ಬಹಳಷ್ಟು ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ. ಕ್ಯಾಬಿನೆಟ್ನಲ್ಲಿ ಹಲವು ವಿಷಯಗಳಿಗೆ ನಿರ್ಣಯ ತೆಗೆದುಕೊಂಡಿದ್ದಾರೆ. ಗ್ಯಾರಂಟಿಗಳನ್ನು ಗೊಂದಲದ ಗೂಡಾಗಿಸಿದ್ದಾರೆ. ಇದೆಲ್ಲರ ಬಗ್ಗೆ ಖಂಡಿತವಾಗಿ ಸದನದಲ್ಲಿ ವಿಸ್ತೃತವಾಗಿ ಚರ್ಚಿಸುತ್ತೇವೆ ಎಂದರು.
ಗೃಹಜ್ಯೋತಿ ಮೊದಲು ೨೦೦ ಯುನಿಟ್ ಎಂದರು, ನಂತರ ವರ್ಷದ ಸರಾಸರಿ ಎಂದರು ಈ ರೀತಿ ಬಹಳ ಗೊಂದಲಗಳಿವೆ, ವಿದ್ಯುತ್ ಬಿಲ್ ಹೆಚ್ಚಿಸಿ ಈಗಾಗಲೆ ಶಾಕ್ ಕೊಟ್ಟಿದ್ದಾರೆ ಇದೆಲ್ಲದರ ಬಗ್ಗೆ ಚರ್ಚಿಸುತ್ತೇವೆ ಎಂದರು.
No need to come here to talk about politics