ಚಿಕ್ಕಮಗಳೂರು: ದತ್ತಮಾಲಾ ಅಭಿಯಾನದ ರಜತ ಮಹೋತ್ಸವ ಅಂಗವಾಗಿ ನಗರದ ಹನುಮಂತಪ್ಪ ವೃತ್ತದ ಬಳಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಪದಾಧಿಕಾರಿಗಳು ಭಾರತ ಮಾತೆಗೆ ಪುಷ್ಪನಮನ ಸಲ್ಲಿಸಿ ಅಲಂಕಾರ ಕಾರ್ಯಕ್ರಮ ಅಧಿಕೃತವಾಗಿ ಶನಿವಾರ ಸಂಜೆ ಚಾಲನೆ ನೀಡಿದರು.
ವಿಹೆಚ್ಪಿ ಸಹ ಸಂಯೋಜಕ ಶ್ಯಾಮ ವಿ.ಗೌಡ ಮಾತನಾಡಿ ಇಂದಿನಿಂದ ಡಿ.೧೬ರವರೆಗೆ ದತ್ತಮಾಲಾ ದಂದು ನಗರವು ಸಂಪೂರ್ಣ ಕೇಸರಿಕರಣದಿಂದ ಕೂಡಿರುತ್ತದೆ. ಡಿ.೬ ರಂದು ಕಾಮಧೇನು ಗಣಪತಿ ದೇವಾಲಯಲ್ಲಿ ದತ್ತಮಾಲಾ ಧಾರಣೆ ನಡೆಯಲಿದೆ. ೧೨ ರಂದು ಅನಸೂಯಪೂಜೆ, ೧೩ ರಂದು ಬೃಹತ್ ಶೋಭಾಯಾತ್ರೆ ಹಾಗೂ ೧೪ ರಂದು ದತ್ತಪಾದುಕೆ ದರ್ಶನಕ್ಕೆ ತೆರಳಲಾಗುವುದು ಎಂದರು.
ಈ ಸಂದರ್ಭದಲ್ಲಿ ವಿಹೆಚ್ಪಿ ಪ್ರಾಂತಕಾರ್ಯಕಾರಿ ಸದಸ್ಯ ರಘು ಸಕಲೇಶಪುರ, ಜಿಲ್ಲಾಧ್ಯಕ್ಷ ಶ್ರೀಕಾಂ ತ್ ಪೈ, ಉಪಾಧ್ಯಕ್ಷ ಯೋಗೀಶ್ ರಾಜ್ ಅರಸ್, ಕಾರ್ಯದರ್ಶಿ ರಂಗನಾಥ್, ಸಹ ಕಾರ್ಯದರ್ಶಿ ಅಮಿ ತ್, ನಗರ ಕಾರ್ಯದರ್ಶಿ ಕೃಷ್ಣ, ಸಹ ಕಾರ್ಯದರ್ಶಿ ಸುನೀಲ್, ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾ ರ್, ಸದಸ್ಯ ರೂಪಕುಮಾರ್, ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಸಂತಾ ಅನಿಲ್, ಮುಖಂಡರುಗಳಾದ ಸಂತೋಷ್ ಕೋಟ್ಯಾನ್, ಬಿ.ರಾಜಪ್ಪ, ಮಂಜುನಾಥ್, ಕಿರಣ್, ಗುರು ಮತ್ತಿತರರಿದ್ದರು.
Silver Jubilee of Dattamala Campaign inaugurated