ಚಿಕ್ಕಮಗಳೂರು: ಹಿರಿಯ ವಕೀಲರ ಅನುಭವ ಹಾಗೂ ವಾದ ಮಂಡಿಸುವ ಚಾಣ ಕ್ಯತೆಯನ್ನು ಯುವ ವಕೀಲರು ಅನುಸರಿಸಬೇಕು. ಇದರಿಂದ ಕಾಲಕ್ರಮೇಣ ಪರಿಣಿತಿ ಹೊಂದುವ ಮುಖಾ ಂತರ ನೊಂದವರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದು ಪ್ರಭಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ಭಾನುಮತಿ ಹೇಳಿದರು.
ನಗರದ ಟಿಎಂಎಸ್ ಕಾಲೇಜಿನ ರೋಟರಿ ಸಭಾಂಗಣದಲ್ಲಿ ವಕೀಲರ ಸಂಘದಿಂದ ಏರ್ಪಡಿಸಿದ್ಧ ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ವಕೀಲರು ಸಮಾಜದ ಮುಖ್ಯಭೂಮಿಕೆಯಲ್ಲಿ ಕರ್ತವ್ಯ ನಿರ್ವಹಿಸುವ ಜೊತೆಗೆ ರಾಜಕಾರಣ ಕ್ಷೇತ್ರ ದಲ್ಲೂ ತೊಡಗಿಸಿಕೊಂಡು ಸಮಾಜ ಸುಧಾರಣೆಗೆ ಮುಂದಾಗುತ್ತಿರುವುದು ಖುಷಿಯ ಸಂಗತಿ. ಹೀಗಾಗಿ ಪ್ರಾರಂಭದಲ್ಲಿ ಯುವ ವಕೀಲರಿಗೆ ಮಾರ್ಗದರ್ಶನದ ಅಗತ್ಯವಿದ್ದು, ಕಾನೂನಿನ ತಿಳುವಳಿಕೆ ಬಗ್ಗೆ ಸಂದೇಹ ವಿದ್ದಲ್ಲಿ ಹಿರಿಯರಲ್ಲಿ ಚರ್ಚಿಸಿ ಸಲಹೆ ಪಡೆದುಕೊಳ್ಳಬೇಕು ಎಂದರು.
ವಕೀಲ ವೃತ್ತಿಯಲ್ಲಿ ಎಷ್ಟೇ ತಿಳಿದುಕೊಂಡರೂ ಅಹಂ ಎನ್ನುವುದು ಇರಕೂಡದು. ತಿಳುವಳಿಕೆ ಹೊಂ ದಿದ್ದರೂ ಇನ್ನಷ್ಟು ತಿಳಿಯುವ ಅಂಬಲವಿರಬೇಕು ಎಂದ ಅವರು ಯುವ ವಕೀಲರು ಕಲಿಕೆಗೆ ಹೆಚ್ಚಿನ ಮಹ ತ್ವ ಕೊಡುವುದನ್ನು ರೂಢಿಸಿಕೊಂಡರೆ ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಲು ಸಾಧ್ಯ ಎಂದು ತಿಳಿಸಿದರು.
ಭಾರತದ ಪ್ರಥಮ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರ ಜನ್ಮದಿನ ಅಂಗವಾಗಿ ವಕೀಲರ ದಿನಾ ಚರಣೆ ಆಚರಿಸಲಾಗುತ್ತಿದೆ. ಮಹಾನೀಯರ ತತ್ವಾದರ್ಶ ಹಾಗೂ ಮಾರ್ಗದರ್ಶನವು ಪ್ರತಿ ವಕೀಲರು ಪರಿಪಾಲಿಸಿ ಮುನ್ನೆಡೆದರೆ ವಕೀಲರ ವೃತ್ತಿಯಲ್ಲಿ ಸೇವೆ ಸಲ್ಲಿಸುವುದಕ್ಕೂ ಸಾರ್ಥಕವಾದಂತೆ ಎಂದು ಹೇಳಿ ದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ ಸಮಾಜದಲ್ಲಿ ಶೋಷಣೆ, ದೌರ್ಜ ನ್ಯಗಳಂಥ ಕ್ಷೀಷ್ಟಕರ ಸನ್ನಿವೇಶದಲ್ಲಿ ಸಿಲುಕಿರುವ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಮತ್ತು ರಕ್ಷಣೆ ಒದಗಿಸುವುದು ವಕೀಲರ ಕರ್ತವ್ಯವಾಗಬೇಕು. ಆಗ ಮಾತ್ರ ನಾಗರೀಕ ಸಮಾಜದಲ್ಲಿ ವಕೀಲರಿಗೆ ಹೆಚ್ಚು ಸ್ಥಾನಮಾನ ದೊರಕಲು ಸಾಧ್ಯ ಎಂದರು.
ಸಾರ್ವಜನಿಕ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವ ಇಂಜಿನಿಯರ್, ವೈದ್ಯರು, ಶಿಕ್ಷಕರಿಗಿಂತ ವಕೀಲರ ವೃ ತ್ತಿ ಅತ್ಯಂತ ಪ್ರಮುಖವಾದದು. ಬಡವರ ಪಾಲಿಗೆ ರಕ್ಷ ಕವಚದಂತೆ ದುಡಿಯುವ ವಕೀಲರು ಹೆಚ್ಚು ಕಾನೂ ನು ತಿಳುವಳಿಕೆ ಮೂಡಿಸಿಕೊಂಡರೆ ಶೋಷಿತರ ಪರವಾಗಿ ಸದೃಢವಾಗಿ ನಿಲ್ಲಬಹುದು ಎಂದರು.
ಪ್ರಸ್ತುತ ರಾಜಕೀಯ ಮುಖಂಡರು ಅಥವಾ ಅಧಿಕಾರಿಗಳು ತಪ್ಪೆಸಗಿದರೆ ಪ್ರಶ್ನಿಸುವ ಗುಣಗಳನ್ನು ವಕೀ ಲರು ಬೆಳೆಸಿಕೊಳ್ಳಬೇಕು. ಅನ್ಯಾಯವನ್ನು ದೃಢವಾಗಿ ಮೆಟ್ಟಿ ನಿಲ್ಲುವಂತ ಸಾಮರ್ಥ್ಯ ವಕೀಲರು ಅಳವಡಿಸಿ ಕೊಂಡರೆ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಬಹುದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ನ್ಯಾಯ ಪೀಠದಲ್ಲಿ ನ್ಯಾಯವಾದಿಗಳು ಹಾಗೂ ವಕೀಲರ ಪರಸ್ಪರ ಸಂಬಂಧ ಹೊಂದಾಣಿಕೆಯಿಂದ ಕೂಡಿರಬೇಕು. ಕ್ಷುಲಕ ಕಾರಣಗಳಿಗೆ ಮನಸ್ಥಾಪ ಉಂಟಾಗದಂತೆ ಕಕ್ಷಿಗಾರರ ಸೇವೆಗೆ ಮುಂದಾದರೆ ಸಮಾಜದಲ್ಲಿ ಉನ್ನತ ಸ್ಥಾನ ದೊರೆಯಲು ಸಾಧ್ಯ ಎಂದರು.
ಕಾರ್ಯಕ್ರಮಕ್ಕೂ ಮುನ್ನ ವಕೀಲ ಎಸ್.ಎಸ್.ವೆಂಕಟೇಶ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ತದ ನಂತರ ಕ್ರೀಡಾಕೂಟ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿ ಸಲಾಯಿತು. ಬಳಿಕ ವಕೀಲರ ವೃತ್ತಿಯಲ್ಲಿ ನಿರಂತರ ಸೇವೆ ಸಲ್ಲಿಸಿದ ಎಂ.ಕೆ.ರಮೇಶ್, ಜಿ.ಎಂ.ಜಯಕುಮಾ ರ್, ಅನಿಲ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಶರತ್ಂದ್ರ, ಕಾರ್ಯದರ್ಶಿ ಅನಿಲ್ಕುಮಾರ್, ಸಹ ಕಾರ್ಯದರ್ಶಿ ಪ್ರಿಯದರ್ಶಿನಿ, ಖಜಾಂಚಿ ದೀಪಕ್, ನ್ಯಾಯಾಧೀಶರುಗಳಾದ ವಿ.ಹನುಮಂತಪ್ಪ, ರಾಘವೇ ಂದ್ರ ಕುಲಕರ್ಣಿ, ಕೃಷ್ಣ, ದ್ಯಾವಪ್ಪ, ಮಂಜುನಾಥ್, ಹರೀಶ್, ಶ್ರೀಮತಿ ಮಂಜು, ನಂದಿನಿ ಹಾಗೂ ವಕೀಲರ ಕುಟುಂಬದವರು ಉಪಸ್ಥಿತರಿದ್ದರು.
Lawyers’ Day celebration organized by the Bar Association