ಬೀರೂರು.: ಸಾರ್ವಜನಿಕರು ಮತ್ತು ಶಿಕ್ಷಣಪ್ರೇಮಿಗಳಿಗೆ ಸಹಕಾರವೆಂದು ಖರೀದಿ ಕುಟುಂಬದವರು ನೀಡಿದ ಭೂಮಿಯನ್ನು ಕೆ.ಎಲ್.ಕೆ.ಕಾಲೇಜು ಮೈದಾನವೆಂದೆ ಇತಿಹಾವಿರುವ ಈ ಮೈದಾನಕ್ಕೆ ಬಹಳ ವರ್ಷಗಳಿಂದ ವಾಕಿಂಗ್ ಟ್ರಾಕ್ ಮಾಡಬೇಕೆಂದು ಒತ್ತಾಹಿಸಿದರ ಪರಿಣಾಮ ಇಂದು ೩೯ಲಕ್ಷರೂ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಅವರು ಶನಿವಾರ ಕೆ.ಎಲ್.ಕೆ ಮೈದಾನದಲ್ಲಿ ನಗರೊತ್ಥಾನ ೪ರ ಯೋಜನೆಯಡಿ ವಾಕಿಂಗ್ ಟ್ರಾಕ್ ಮಾಡಲು ಇಂಟರ್ ಲಾಕ್ ಪಾತ್ ವೇ ಮತ್ತು ಪುರಸಭೆ ಹಿಂಭಾಗದಲ್ಲಿ ಪೌರಕಾರ್ಮಿರಿಗೆ ವಿಶ್ರಾಂತ ಗೃಹ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಈ ಮೈದಾನಕ್ಕೆ ತನ್ನದೇ ಆದ ಇತಿಹಾವಿದ್ದು, ಇಲ್ಲಿ ಅನೇಕ ರಾಜಕಾರಣ ದಿಗ್ಗಜರು ಭೇಟಿ ನೀಡಿ ಹೋಗಿದ್ದಾರೆ. ಜೊತೆಗೆ ಬೀರೂರು ಪಟ್ಟಣದ ಅನೇಕ ವೃದ್ದರು, ಶಾಲಾ ವಿದ್ಯಾರ್ಥಿಗಳು ಇಲ್ಲಿ ವಿಶ್ರಾಂತಿ ತೆಗೆದುಕೊಂಡು ನಡೆದಾಡುತ್ತಾರೆ. ವಿದ್ಯಾರ್ಥಿಗಳು ಯುವಕರು ಕ್ರೀಡೆಗಳನ್ನಾಡಲು ಈ ಮೈದಾನವನ್ನು ಬಳಸುತ್ತಿದ್ದಾರೆ. ಮಳೆಗಾಲದಲ್ಲಿ ಮೈದಾನ ಕಪ್ಪುಮಣ್ಣಿರುವ ಕಾರಣ ಕೆಸರಿನಿಂದ ಕಾಲಿಡಲು ಸಹ ಆಗುವುದಿಲ್ಲ. ಇದಕ್ಕೆ ವಾಕಿಂಗ್ ಟ್ರಾಕ್ ಮಾಡಿದರೆ ಈ ಸಮಸ್ಯೆ ತಪ್ಪುತ್ತದೆ ಎನ್ನುವ ನಿಟ್ಟಿನಲ್ಲಿ ೩೯ಲಕ್ಷರೂ ವೆಚ್ಚದಲ್ಲಿ ೪೦೦ಮೀ ಶೀಘ್ರದಲ್ಲಿಯೇ ಇಂಟರ್ ಲಾಕ್ ಪಾತ್ ವೇ ಶೀಘ್ರವೇ ನಿರ್ಮಾಣವಾಗುತ್ತದೆ. ಇದರಿಂದ ಯುವಕರ ಕ್ರೀಡೆಗೂ ಉತ್ತೇಜನ ಸಿಗುತ್ತದೆ. ಜೊತೆಗೆ ಮುಂದಿನ ದಿನಗಳಲ್ಲಿ ಈ ಮೈದಾನವನ್ನು ತಾಲ್ಲೂಕು ಮಟ್ಟದ ಕ್ರೀಡಾಂಗಣ ಮಾಡಿಕೊಡಲು ಶ್ರಮಿಸಲಾಗುವುದು ಎಂದರು.
ಪುರಸಭೆ ಪೌರ ಕಾರ್ಮಿಕರು ತ್ಯಾಗಜೀವಿಗಳು, ಬೆಳಗ್ಗೆ ೬ಕ್ಕೆ ಅವರು ಪಟ್ಟಣವನ್ನು ಸ್ವಚ್ಚಗೊಳಿಸಲು ಪ್ರಾರಂಭಿಸಿದರೇ ಸಂಜೆಯ ತನಕ ದುಡಿಯುವ ಈ ಕಾಯಕ ಯೋಗಿಗಳು ವಿಶ್ರಾಂತಿ ತೆಗದುಕೊಳ್ಳಲು ವಿಶ್ರಾಂತಿ ಗೃಹ ಇರಲಿಲ್ಲದನ್ನು ಮನಗಂಡು ಅವರು ಕೆಲಸ ಮುಗಿಸಿ ವಿರಾಮ ವಿದ್ದ ಸಮಯದಲ್ಲಿ ವಿಶ್ರಮಿಸಲು ೨೦ಲಕ್ಷರೂ ಅನುದಾನದಲ್ಲಿ ವಿಶ್ರಾಂತಿ ಗೃಹ ನಿರ್ಮಾಣವಾಗಲಿದ್ದು ಸ್ವಚ್ಚತ ಪೌರನೌಕರರಿಗೆ ಇದು ಸಹಾಯಕವಾಗಲಿದೆ ಎಂದರು.
ಪುರಸಭೆ ಅಧ್ಯಕ್ಷೆ ವನಿತಮಧು ಬಾವಿಮನೆ ಮಾತನಾಡಿ, ಪಟ್ಟಣದ ಈ ಮೈದಾನಕ್ಕೆ ವಾಕಿಂಗ್ ಟ್ರಾಕ್ ತುಂಬಾ ಅವಶ್ಯಕವಾಗಿದ್ದು, ಶಾಸಕರು ಮಾಡುತ್ತಿರುವುದು ಶ್ಲಾಘನೀಯ, ಆದರೆ ಮೈದಾನದೊಡ್ಡದಿರುವ ಕಾರಣ ಇಲ್ಲಿ ಸಂಜೆ ಪೋಲಿಪೋಕರಿಗೆ ಅಡ್ಡೆಯಾಗದಂತೆ ರಾತ್ರಿ ಸಮಯದಲ್ಲಿ ಕುಡುಕರ ತಾಣವಾಗದಂತೆ ಈ ಮೈದಾನದ ಒಳಭಾಗಕ್ಕೆ ಸುತ್ತಾ ವಿದ್ಯುತ್ ದೀಪ ಅವಳಡಿಸಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.
ಪಟ್ಟಣದಲ್ಲಿ ಬೇಸಿಗೆ ಇರುವುದ್ದರಿಂದ ಭದ್ರಾ ನೀರು ಪೂರೈಕೆ ವ್ಯತ್ಯಾಸವಾದಲ್ಲಿ ಸಾರ್ವಜನಿಕರಿಗೆ ನೀರು ನೀಡಲು ಸಾಧ್ಯವಾಗುತ್ತಿಲ್ಲ. ಶಾಸಕರಾದ ತಾವು ಪ್ರತಿ ವಾರ್ಡಗಳಿಗೆ ಬೋರ್ ಕೊರೆಸಿದರೆ ಅನುಕೂಲವಾಗುತ್ತದೆ. ಜೊತೆಗೆ ಭಗವತ್ ನಗರ ಮತ್ತು ಪುರಿಭಟ್ಟಿ ವಾರ್ಡಗಳಿಗೆ ರಸ್ತೆ ಕಾಮಗಾರಿ ಪೂರ್ಣವಾಗಿಲ್ಲ ಅದನ್ನು ತಾವು ಮಾಡಿಸಲು ಅನುದಾನ ನೀಡಬೇಕೆಂದರು.
ಇದಕ್ಕೆ ಪ್ರತಿಕ್ರಿಸಿದ ಶಾಸಕರು, ಈ ಹಿಂದೆ ಬೀರೂರು ಪಟ್ಟಣದ ಪಂಪೌ ಹೌಸ್ ಸುತ್ತಾಮುತ್ತಾ ೫ಬೋರ್ ಕೊರೆಸಲಾಗಿದ್ದು, ಇನ್ನು ನೀರಿನ ಅಭಾವವಿದ್ದರೆ ಮುಂದಿನ ದಿನಗಳಲ್ಲಿ ಕೊಳವೆ ಬಾವಿ ಕೊರೆಸಲಾಗುವುದು. ಪಟ್ಟಣದಲ್ಲಿ ೨೩ ವಾರ್ಡಗಳಲ್ಲಿಯು ಸಹ ರಸ್ತೆ ಸಮಸ್ಯೆ ಇದ್ದರೆ ಮುಂದಿನ ದಿನಗಳಲ್ಲಿ ಪರಿಶೀಲಿಸಿ ಆದ್ಯತೆ ಮೇರೆಗೆ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಮಾಡಿಸಲಾಗುವುದು. ರಾಷ್ಟ್ರಿಯ ಹೆದ್ದಾರಿ ಹಾದುಹೋಗಿರುವ ಪರಿಣಾಮ ಸ್ಮಶಾಣವು ಸಹ ಹಾಳಾಗಿದ್ದು ಅದರ ಅಭಿವೃದ್ದಿಗು ಸಹ ಹಣ ಮೀಸಲಿರಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್, ಉಪಾಧ್ಯಕ್ಷ ನಾಗರಾಜ್, ಸದಸ್ಯರಾದ ಬಿ.ಕೆ.ಶಶಿಧರ್, ರಾಜು, ರವಿಕುಮಾರ್, ಬಿ.ಆರ್.ಮೋಹನ್ ಕುಮಾರ್, ಗ್ಯಾರಂಟಿ ಯೋಜನೆ ಅಧ್ಯಕ್ಷ ಆಸಂದಿ ಕಲ್ಲೇಶ್, ಆರೋಗ್ಯ ನಿರೀಕ್ಷಕ ವೈ.ಎಂ.ಲಕ್ಷ್ಮಣ್, ಗುತ್ತಿಗೆದಾರ ಗಿರೀಶ್, ಆಶ್ರಯ ಸಮಿತಿ ಸದಸ್ಯ ಮುಬಾರಕ್, ವಿನಾಯಕ್ ಸೇರಿದಂತೆ ಮತ್ತಿತರರು ಇದ್ದರು.
MLAs perform Bhoomi Pooja for walking track construction at KLK Maidan