ALSO FEATURED IN

ಕೇಂದ್ರ ಸರ್ಕಾರ ಜಾತಿ ಜನಗಣತಿ ನಡೆಸುವ ಕಾರ್ಯ ಕ್ರಾಂತಿಕಾರಿ

Spread the love

ಚಿಕ್ಕಮಗಳೂರು: ಸರ್ವರಿಗೂ ಸಾಮಾಜಿಕ ನ್ಯಾಯ, ಸಮಬಾಳು, ಸಮಪಾಲಿಗೆ ಅವಕಾಶ ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾತಿ ಜನಗಣತಿ ನಡೆಸುವ ಕ್ರಾಂತಿಕಾರಿ ಕಾರ್ಯಕ್ಕೆ ಮುಂದಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇವೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯಬೇಕಿರುವ ಜಾತಿ ಜನಗಣತಿಯು ೧೯೩೧ ರ ನಂತರ ೨೦೧೧ ರವರೆಗೆ ನಡೆದೇ ಇರಲಿಲ್ಲ. ೫೦ ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರವು ಈ ಕಾರ್ಯಕ್ಕೆ ಮುಂದಾಗಲಿಲ್ಲ. ಇದೀಗ ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡ ಹಾಗೂ ಸಮುದಾಯದಲ್ಲಿರುವ ಉಪ ಜಾತಿಗಳು ಹಿಂದುಳಿದ ವರ್ಗದಲ್ಲಿರುವ ಸಮುದಾಯಳು, ಸಣ್ಣ ಸಣ್ಣ ಸಮುದಾಯಗಳಿಗೆ ಧ್ವನಿಯಾಗಬೇಕು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಜಾತಿ ಜನಗಣತಿ ನಡೆಸಲು ಮುಂದಾಗಿದೆ. ಇದೊಂದು ಕ್ರಾಂತಿಕಾರಿ ಕಾರ್ಯವಾಗಿದೆ ಎಂದರು.

ಸಮಾಜದ ಮುಖ್ಯವಾಹಿನಿಗೆ ಬಾರದಿರುವ ಸಣ್ಣ ಸಣ್ಣ ಸಮುದಾಯಗಳನ್ನು ಗುರುತಿಸಿ ಅವರ ಬೇಡಿಕೆಗಳೇನು? ಅವರ ಸಂಖ್ಯೆ ಎಷ್ಟಿದೆ ಎನ್ನುವುದನ್ನು ನಿಖರವಾಗಿ ಅರ್ಥಮಾಡಿಕೊಳ್ಳಲು ಈ ಜಾತಿ ಜನಗಣತಿಯಿಂದ ಅನುಕೂಲವಾಗಲಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಜಾತಿ ಜನಗಣತಿ ನಿರ್ಧಾರವನ್ನು ಇಡೀ ಭಾರತ ದೇಶದ ಜನರು ಒಕ್ಕೊರಲಿನಿಂದ ಸ್ವಾಗತಿಸುವ ವಾತಾವರಣ ಕಾಣುತ್ತಿದ್ದೇವೆ. ಬಹಳ ಬೇಗನೇ ಜಾತಿ ಜನಗಣತಿ ಕಾರ್ಯ ಪೂರ್ಣಗೊಳಿಸುವುದು ಮತ್ತು ನಿಖರವಾದ ಮಾಹಿತಿಗಳು ದತ್ತಾಂಶಗಳೇನು ಎನ್ನುವುದು ಜನ ಸಾಮಾನ್ಯರಿಗೆ ಅರ್ಥಮಾಡಿಸುವ ಮೂಲಕ ಸಮಾಜದಲ್ಲಿರುವ ಕೊನೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕೊಡಿಸಬೇಕು ಎನ್ನುವುದು ಯೋಜನೆಯ ಒಟ್ಟು ಉದ್ದೇಶ ಎಂದು ಹೇಳಿದರು.

ಇದೇ ವೇಳೆ ರಾಜ್ಯದ ಸಿದ್ದರಾಮಯ್ಯ ಸರ್ಕಾರದ ಜನಗಣತಿಯಲ್ಲಿ ೧೮೦ ಕೋಟಿ ರೂ. ಖರ್ಚು ಮಾಡಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ನೀಡಿದೆ. ಇದರಲ್ಲಿ ಜಾತಿಯನ್ನು ಉಲ್ಲೇಖಿಸಿರುವುದು ಬಿಟ್ಟರೆ ಅದೇ ಜಾತಿ ಗಣತಿ ಅಲ್ಲ. ಅದನ್ನೇ ಹತ್ತು ವರ್ಷಗಳಿಂದ ಹಿಡಿದುಕೊಂಡು ಅಧಿಕಾರಕ್ಕೆ ಸಂಚಕಾರ ಬರುತ್ತದೆ ಎನ್ನಿಸಿದಾಗಲೆಲ್ಲಾ ಈಗ ಬಿಡುತ್ತೇನೆ, ಈಗ ಬಿಡುತ್ತೇನೆ ಎಂದು ಹೇಳುತ್ತಿರುವುದು ಬಿಟ್ಟರೆ ಈ ಕ್ಷಣದ ವರೆಗೆ ಅದಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಣಯವನ್ನೂ ಸಿದ್ದರಾಮಯ್ಯ ಸರ್ಕಾರ ತೆಗೆದುಕೊಂಡಿಲ್ಲ. ಕೆಲವು ಸಮುದಾಯ ತಮ್ಮದೇ ಆದ ಸಮಸ್ಯೆ ಹೇಳಿಕೊಂಡಿವೆ ಅವರಿಗೂ ಉತ್ತರ ಕೊಡುವ ಕೆಲಸ ಆಗಿಲ್ಲ ಎಂದರು.

ಈ ಎಲ್ಲಾ ಹಿನ್ನೆಲೆಯಲ್ಲಿ ಕರ್ನಾಟಕದ ಜಾತಿ ಅಥವಾ ಜನಗಣತಿಯಲ್ಲಿ ಕೇವಲ ಅಧಿಕಾರದ ಕುರ್ಚಿ ಅಲುಗಾಡುವ ಸಂದರ್ಭದಲ್ಲಿ ರಕ್ಷಣೆಗೆ ಮಾತ್ರ ಮಾಡಿರುವ ವ್ಯವಸ್ಥೆ ಅಷ್ಟೆ. ಅದು ಸರ್ವ ಸಮುದಾಯವನ್ನು ಒಳಗೊಂಡ ಒಂದು ವ್ಯವಸ್ಥೆಯಾಗಿ ನಿಖರವಾಗಿ ಜನರಿಗೆ ತಲುಪಿಸಿಲ್ಲ. ಹಾಗೂ ಅದಕ್ಕೆ ಉತ್ತರದಾಯಿಯಾಗಿ ರಾಜ್ಯ ಸರ್ಕಾರ ವರ್ತಿಸಿಲ್ಲ ಎಂದರು.

ಕೇಂದ್ರ ಜಾತಿ ಜನಗಣತಿಯು ರಾಹುಲ್ ಗಾಂಧಿ ಅಥವಾ ಸಿದ್ದರಾಮಯ್ಯ ಅವರನ್ನು ಕೇಳಿ ಮಾಡಿದ ಕಾರ್ಯವಲ್ಲ. ಕಾಶ್ಮೀರದಲ್ಲಿ ೩೭೦ ರದ್ದು ಮಾಡಿದಾಗ ರಾಹುಲ್ ಗಾಂಧಿ ಸ್ವಾಗತಿಸಲೂ ಇಲ್ಲ. ಭಯೋತ್ಪಾದನೆ ನಿಯಂತ್ರಿಸಲು ಯತ್ನಿಸಿದ್ದೀರಿ ಎನ್ನುವ ಮಾತನ್ನೂ ಹೇಳಲಿಲ್ಲ. ಅದನ್ನು ವಿರೋಧಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆ ತಂದಾಗಲೂ ಅಮಾಯಕರಿಗೆ ನ್ಯಾಯ ಸಿಕ್ಕಿತೆಂದು ಹೇಳಲಿಲ್ಲ. ಬದಲಿಗೆ ವಿರೋಧ ಮಾಡಿದರು. ಮುಸ್ಲಿಂ ಮಹಿಳೆಯರಿಗೆ ತ್ರಿಬಲ್ ತಲಾಕ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಅವಕಾಶ ಕೊಟ್ಟಾಗಲೂ ಕೇವಲ ಓಟಿನ ಉದ್ದೇಶಕ್ಕೆ ಹಿಂದೆ ಕಾಂಗ್ರೆಸ್ ರದ್ದು ಪಡಿಸಿಸದ್ದು ಇತಿಹಾಸ ಎಂದು ದೂರಿದರು.

ತ್ರಿವಳಿ ತಲಾಕ್ ತೆಗೆದು ಮುಸ್ಲಿಂ ಮಹಿಳೆಯರಿಗೆ ಗೌರವ ಕೊಟ್ಟಿದ್ದು ಮೋದಿ ಸರ್ಕಾರ ಅದನ್ನೂ ಕಾಂಗ್ರೆಸ್ ಸ್ವಾಗತಿಸಲಿಲ್ಲ. ಬಡ ಮುಸ್ಲಿಮರಿಗೆ ಅನುಕೂಲವಾಗುವ ವಕ್ಫ್ ತಿದ್ದುಪಡಿ ಕಾಯಿದೆಯನ್ನೂ ಕಾಂಗ್ರೆಸ್ ಸ್ವಾಗತಿಸಲಿಲ್ಲ ಎಂದು ಆರೋಪಿಸಿದರು.

ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಸಾವು ಕೇವಲ ಒಂದು ಹತ್ಯೆ ಎನ್ನುವುದಕ್ಕಿಂತಲೂ ವ್ಯವಸ್ಥಿತ ಸಂಚು ರೂಪಿಸಿ ನಡೆಸಲಾಗಿರುವ ಕೃತ್ಯವಾಗಿದೆ. ಈ ಪ್ರಕರಣವನ್ನು ಕೇಂದ್ರದ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಒತ್ತಾಯಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ಸಂಪೂರ್ಣ ಹದಗೆಟ್ಟಿದೆ. ಉದ್ದೇಶಪೂರ್ವಕವಾಗಿ ಸುಹಾಸ್‌ಗೆ ಬೆದರಿಕೆಗಳು ಬರುತ್ತಿದ್ದವು. ಪೊಲೀಸ್ ಇಲಾಖೆ ಸ್ವಲ್ಪ ಜಾಗ್ರತೆ ವಹಿಸಿದ್ದರೆ ಈ ಹತ್ಯೆ ತಪ್ಪಿಸಬಹುದಿತ್ತು ಎಂದರು.

ರಾಜ್ಯದಲ್ಲಿ ಪೊಲೀಸರು ನಡೆದುಕೊಳ್ಳುವ ರೀತಿ ಅತ್ಯಂತ ಖಂಡನೀಯವಾದದ್ದು, ರಾಜ್ಯ ಸರ್ಕಾರ ಸಹ ಯಾರ ಮೇಲೂ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳದಿರುವುದು ದುರಾದೃಷ್ಠಕರ. ಸುಹಾಸ್ ಸಾವಿಗೆ ನ್ಯಾಯ ಸಿಗುವ ವರೆಗೆ ಹೋರಾಟ ನಡೆಸಬೇಕಿದೆ. ಎಲ್ಲರೂ ಜಾಗೃತರಾಗರಬೇಕಾಗುತ್ತದೆ. ಈ ಘಟನೆಯನ್ನು ಖಂಡಿಸುತ್ತೇವೆ. ತಪ್ಪಿತಸ್ಥರ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇವೆ ಎಂದು ಹೇಳಿದರು.

ಮತೀಯತೆಯ ವಿಕಾರತೆ ತುಂಬಿದಾಗ, ಈ ನಾಡಿನ ಕಾನೂನಿನ ಬಗ್ಗೆ ಗೌರವ ಇಲ್ಲದೇ ಇದ್ದಾಗ ನಾವು ಬಲ ಪ್ರಯೋಗ ಮಾಡಿ ಏನನ್ನಾದರೂ ಮಾಡುತ್ತೇವೆ ಎನ್ನುವ ಮನಸ್ಥಿತಿ, ವಾತಾವರಣ ಸೃಷ್ಠಿಯಾದಾಗ ಇಂತಹ ಕೊಲೆಗಡುಕರು ಹುಟ್ಟಿಕೊಳ್ಳುತ್ತಾರೆ. ಇಂತಹ ಅಪರಾಧಿಗಳಿಗೆ ಒಂದು ಬಾರಿ ಕಠಿಣ ಶಿಕ್ಷೆಗೆ ಗುರಿಪಡಿಸಿದಾಗ ಮಾತ್ರ ನಿಯಂತ್ರಣಕ್ಕೆ ತರಬಹುದು ಎಂದರು

The central government’s task of conducting caste census is revolutionary

Facebook
X
WhatsApp
Telegram
Spread the love

ಚಿಕ್ಕಮಗಳೂರು: ಈ ಬಾರಿಯ ಸಂಸತ್ ಅಧಿವೇಶನದಲ್ಲಿ ರಾಜ್ಯದ ಕಾಫಿ ಬೆಳೆಯುವ ಪ್ರದೇಶದ ಸಂಸದರು ಒಟ್ಟಿಗೆ ಸೇರಿ ದೆಹಲಿಯಲ್ಲಿ ಸರ್ಫೇಸಿ ಕಾಯ್ದೆಯನ್ನು ಕಾಫಿ…

Spread the love

ಚಿಕ್ಕಮಗಳೂರು: ಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ೧೧ ವರ್ಷದ ಪೀಳಿಗೆಯು ಕೇಂದ್ರದಲ್ಲಿ ಒಂದೇ ಒಂದು ಭ್ರಷ್ಟಾಚಾರವಿಲ್ಲದ ವಿಶ್ವಾಸಾರ್ಹವಾದ, ಒಳ್ಳೆಯ…

Spread the love

ಚಿಕ್ಕಮಗಳೂರು: ಈ ಬಾರಿಯ ಸಂಸತ್ ಅಧಿವೇಶನದಲ್ಲಿ ರಾಜ್ಯದ ಕಾಫಿ ಬೆಳೆಯುವ ಪ್ರದೇಶದ ಸಂಸದರು ಒಟ್ಟಿಗೆ ಸೇರಿ ದೆಹಲಿಯಲ್ಲಿ ಸರ್ಫೇಸಿ ಕಾಯ್ದೆಯನ್ನು ಕಾಫಿ…

Spread the love

ಚಿಕ್ಕಮಗಳೂರು: ಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ೧೧ ವರ್ಷದ ಪೀಳಿಗೆಯು ಕೇಂದ್ರದಲ್ಲಿ ಒಂದೇ ಒಂದು ಭ್ರಷ್ಟಾಚಾರವಿಲ್ಲದ ವಿಶ್ವಾಸಾರ್ಹವಾದ, ಒಳ್ಳೆಯ…

[t4b-ticker]
Exit mobile version