ALSO FEATURED IN

ನಾಗರೀಕರ ಅರೋಗ್ಯ ಸಮಸ್ಯೆಗೆ ಜ್ಯೋತಿ ಡಯಾಗ್ನಸ್ಟಿಕ್ ಲ್ಯಾಬೋರೇಟರಿ ಪೂರಕ

Spread the love

ಚಿಕ್ಕಮಗಳೂರು:  ನಗರವೂ ಸೇರಿದಂತೆ ಚಿಕ್ಕಮಗಳೂರು ತಾಲ್ಲೂಕಿನ ಸುತ್ತಮುತ್ತಲ ಗ್ರಾಮಗಳ ನಾಗರೀಕರ ಆರೋಗ್ಯ ಸಮಸ್ಯೆಗೆ ಪೂರಕವಾಗಿ ಜ್ಯೋತಿ ಡಯಾಗ್ನಸ್ಟಿಕ್ ಲ್ಯಾಬೋರೇಟರಿ ರಕ್ತ ಪರೀಕ್ಷೆ ಮಾಡುವ ಮೂಲಕ ಜನರ ಆರೋಗ್ಯಕ್ಕೆ ಮಾದರಿಯಾಗಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅಭಿಪ್ರಾಯಿಸಿದರು.

ಅವರು ಇಂದು ನಗರದ ಎಂಜಿ ರಸ್ತೆಯಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವಾಣಿಜ್ಯ ಕಟ್ಟಡದಲ್ಲಿ ಈ ನೂತನ ಜ್ಯೋತಿ ಡಯಾಗ್ನಸ್ಟಿಕ್ ಲ್ಯಾಬೋರೇಟರಿಯನ್ನು ಉದ್ಘಾಟಿಸಿ ಮಾತನಾಡಿದರು.

ಗುಣಮಟ್ಟದ ರಕ್ತಪರೀಕ್ಷೆಯ ವರದಿಯನ್ನು ನೀಡಿ ರೋಗಿಗಳು ಶೀಘ್ರ ಗುಣಮುಖರಾಗುವಂತೆ ಖಾಸಗಿಯಾಗಿದ್ದರೂ ಸೇವೆ ಮಾಡಲಿ ಎಂದು ಶುಭ ಹಾರೈಸಿದರು.

ನಗರಸಭಾಧ್ಯಕ್ಷೆ ಶೀಲಾದಿನೇಶ್ ಮಾತನಾಡಿ, ನಗರದ ನಾಗರೀಕರು ಈ ಲ್ಯಾಬೋರೇಟರಿಯಲ್ಲಿ ಆರೋಗ್ಯ ಸಮಸ್ಯೆಗೆ ಸಂಬಂಧಿಸಿದ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವ ಮೂಲಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಿ ಎಂದರು.

ಲ್ಯಾಬೋರೇಟರಿ ಮಾಲಿಕ ವಾಸುದೇವ ನಾಯ್ಡು ಮಾತನಾಡಿ, ಥೈರಾಯ್ಡ್ ಪರೀಕ್ಷೆಯ ವರದಿ ಸಿಗಬೇಕಾದರೆ ೨೪ ಗಂಟೆ ಕಾಯಬೇಕಾಗಿತ್ತು. ಆದರೇ, ಈ ಜ್ಯೋತಿ ಡಯಾಗ್ನಸ್ಟಿಕ್ ಲ್ಯಾಬೋರೇಟರಿಯಲ್ಲಿ ಪರೀಕ್ಷೆ ಮಾಡಿದ ಕೆಲವೇ ಗಂಟೆಗಳಲ್ಲಿ ವರದಿಯನ್ನು ನೀಡುವುದು ವಿಶೇಷತೆಯಾಗಿದೆ ಎಂದು ಹೇಳಿದರು.
ಥೈರಾಯ್ಡ್ ಮುಂತಾದ ಪರೀಕ್ಷೆಗಳನ್ನು ಮಾಡಿಸಿ ಅದನ್ನು ಬೆಂಗಳೂರು ಮುಂತಾದೆಡೆ ಕಳುಹಿಸಿ ವರದಿಗಾಗಿ ಕಾಯಬೇಕಿತ್ತು. ಜನರ ಅನುಕೂಲತೆಗೆ ತಕ್ಕಂತೆ ಈ ಲ್ಯಾಬೋರೇಟರಿಯನ್ನು ಪ್ರಾರಂಭಿಸಿದ್ದೇವೆ ಎಂದರು.

ಪ್ರತೀ ಗಂಟೆಗೆ ವಿವಿಧ ರೀತಿಯ ೪೦ ಪರೀಕ್ಷೆಗಳನ್ನು ಮಾಡಲು ಅವಕಾಶವಿದ್ದು, ೮೦ ಪ್ಯಾರಾಮೀಟರ್‌ಗಳಲ್ಲಿ ಪರೀಕ್ಷೆ ಮಾಡುವ ಹಾರ್ಮೋನ್ ಮಷಿನ್, ಆಟೋಮೇಟೆಡ್ ಬಯೋ ಕೆಮಿಸ್ಟ್ರಿ ಮುಂತಾದ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು.

ಈ ಲ್ಯಾಬೋರೇಟರಿಯಲ್ಲಿ ದಿನದ ೨೪ ಗಂಟೆಯೂ ಸೇವೆ ಲಭ್ಯವಿದ್ದು, ನಗರದ ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ವರ್ತಕ ವಿಫುಲ್ ಕುಮಾರ್ ಜೈನ್, ಡಾ. ಜೆ.ಪಿ. ಕೃಷ್ಣೇಗೌಡ, ಡಾ. ಗೌರಿ, ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜು ಮತ್ತಿತರರು ಉಪಸ್ಥಿತರಿದ್ದು ಶುಭ ಹಾರೈಸಿದರು.

Jyoti Diagnostic Laboratory complements citizens’ health problems

Facebook
X
WhatsApp
Telegram
Spread the love

ದಾವಣಗೆರೆ: ಹಿಂದೆ ಏನೇ ನಡೆದಿರಲಿ. ಶ್ರೀ ಜಗದ್ಗುರು ಪಂಚಾಚಾರ್ಯರು ಒಗ್ಗೂಡಿ ಹೆಜ್ಜೆ ಹಾಕಿದಲ್ಲಿ ಸದೃಢ ಸಮಾಜ ಕಟ್ಟಿ ಬೆಳೆಸಲು ಸಾಧ್ಯವಾಗುತ್ತದೆ ಎಂದು…

Spread the love

ಚಿಕ್ಕಮಗಳೂರು:  ನಗರವೂ ಸೇರಿದಂತೆ ಚಿಕ್ಕಮಗಳೂರು ತಾಲ್ಲೂಕಿನ ಸುತ್ತಮುತ್ತಲ ಗ್ರಾಮಗಳ ನಾಗರೀಕರ ಆರೋಗ್ಯ ಸಮಸ್ಯೆಗೆ ಪೂರಕವಾಗಿ ಜ್ಯೋತಿ ಡಯಾಗ್ನಸ್ಟಿಕ್ ಲ್ಯಾಬೋರೇಟರಿ ರಕ್ತ…

Spread the love

ದಾವಣಗೆರೆ: ಹಿಂದೆ ಏನೇ ನಡೆದಿರಲಿ. ಶ್ರೀ ಜಗದ್ಗುರು ಪಂಚಾಚಾರ್ಯರು ಒಗ್ಗೂಡಿ ಹೆಜ್ಜೆ ಹಾಕಿದಲ್ಲಿ ಸದೃಢ ಸಮಾಜ ಕಟ್ಟಿ ಬೆಳೆಸಲು ಸಾಧ್ಯವಾಗುತ್ತದೆ ಎಂದು…

Spread the love

ಚಿಕ್ಕಮಗಳೂರು:  ನಗರವೂ ಸೇರಿದಂತೆ ಚಿಕ್ಕಮಗಳೂರು ತಾಲ್ಲೂಕಿನ ಸುತ್ತಮುತ್ತಲ ಗ್ರಾಮಗಳ ನಾಗರೀಕರ ಆರೋಗ್ಯ ಸಮಸ್ಯೆಗೆ ಪೂರಕವಾಗಿ ಜ್ಯೋತಿ ಡಯಾಗ್ನಸ್ಟಿಕ್ ಲ್ಯಾಬೋರೇಟರಿ ರಕ್ತ…

[t4b-ticker]
Exit mobile version