Author: chikkamagalur express

ಚಿಕ್ಕಮಗಳೂರು:  ಸಾಮಾಜದ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗಾಗಿ ಕಾರ್ಯನಿರ್ವಹಿಸುವ ಪೊಲೀಸರೊಂದಿಗೆ ಸಾರ್ವಜನಿಕರು ಉತ್ತಮ ಭಾಂದವ್ಯವನ್ನಿರಿಸಿಕೊಂಡು ಅವರ ಕರ್ತವ್ಯಕ್ಕೆ ಸಹಕಾರ ನೀಡಿದರೆ ಸುಸ್ಥಿರ ಸಮಾಜ ನಿರ್ಮಾಣ ಮಾಡಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ ಹೇಳಿದರು. ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಇಂದು ನಗರದ ರಾಮನಹಳ್ಳಿ ಪೊಲೀಸ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ನಾಗರೀಕ ಬಂದೂಕು ಶಿಬಿರದ ಸಮಾರೋಪ ಸಮಾರಂಭ ಮತ್ತು ಯಶಸ್ವಿಯಾಗಿ ಬಂದೂಕು ತರಬೇತಿ ಪೂರ್ಣಗೊಳಿಸಿದ ನಾಗರೀಕರಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇಲಾಖೆಯು ಭದ್ರತೆ ಹಾಗೂ ರಕ್ಷಣೆ ಜೊತೆಗೆ ಸಮಾಜದಲ್ಲಿ ಶಾಂತಿ ಸ್ಥಾಪಿಸಲು ನಿಷ್ಠೆಯಿಂದ ಕರ್ತವ್ಯದಲ್ಲಿ ತೊಡಗಿಕೊಂಡಿದೆ ಪ್ರತಿಯೊಬ್ಬ ನಾಗರೀಕನೂ ಕಾನೂನು ಅರಿತು ಪಾಲಿಸಿದಲ್ಲಿ ಅಪರಾಧ ಸಂಖ್ಯೆ ಕ್ಷೀಣಿಸುವುದರೊಂದಿಗೆ ಸ್ವಾಸ್ಥ್ಯ ಸಮಾಜವು ನಿರ್ಮಾಣವಾಗುತ್ತದೆ ಎಂದರು. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ. ಸಮಾಜದ ಎಲ್ಲಾ ಸ್ಥಿತಿಗತಿಗಳು, ಆಗು-ಹೋಗುಗಳನ್ನು ಸ್ಫಷ್ಟವಾಗಿ ಅರಿತ ವಿದ್ಯಾವಂತರೇ ಸೈಬರ್ ಕ್ರೈಂನಿಂದ ತಮ್ಮ ಹಣ ಕಳೆದುಕೊಂದು ವಂಚಿತರಾಗಿದ್ದಾರೆ. ಯಾವುದೇ ಅಪರಿಚಿತ ಸಂಖ್ಯೆಯಿಂದ…

Read More

ಚಿಕ್ಕಮಗಳೂರು: ನದಿಗಳು ಉಗಮಗೊಂಡು ಸಣ್ಣ ತೊರೆಗಳಾಗಿ ಕಡಲತೀರಕ್ಕೆ ಸೇರು ವಂತೆ, ದಲಿತ ಸಾಹಿತ್ಯ ಚಟುವಟಿಕೆಗಳು ಹಂತ ಹಂತವಾಗಿ ನಾಡಿನಾದ್ಯಂತ ಪಸರಿಸಬೇಕು. ಬೃಹಾದಕಾ ರವಾಗಿ ಬೆಳೆದು ಸಾಹಿತ್ಯದ ಕಡಲಿನತ್ತ ಸಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿ ದರು. ನಗರದ ಕನ್ನಡ ಭವನದಲ್ಲಿ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ, ಮಹಿಳಾ ಹಾಗೂ ಯುವ ಘಟಕಗಳ ಉದ್ಘಾಟನಾ ಹಾಗೂ ಪದಗ್ರಹಣ ಕಾರ್ಯಕ್ರಮದ ಅಂಗವಾಗಿ ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಭಾನುವಾರ ಅವರು ಮಾತನಾಡಿದರು. ಸಾಹಿತ್ಯಾತ್ಮಕ ಚಟುವಟಿಕೆ ಡೊಳ್ಳು ಬೀಜಗಳಾಗದೇ, ಗಟ್ಟಿಬೀಜವಾಗಿ ಹೊರಹೊಮ್ಮಬೇಕು. ಸ್ವಾರ್ಥ ಅಥವಾ ಸಂಕುಚಿತ ಭಾವನೆಯಿಂದ ಸಾಹಿತ್ಯವು ಹೆಚ್ಚು ಕಾಲಗಳ ಉಳಿಯುವುದಿಲ್ಲ. ಬದಲಾಗಿ ಮನಸ್ಸಿನ ಒಡನಾಳ ಧ್ವನಿಯಾಗಿ ಬೆಳಕು ಚೆಲ್ಲುವ ಜೊತೆಗೆ ಸರಿಯಾದ ಮಾರ್ಗದರೆ ಸಾಗಿಸಿದರೆ ಶಾಶ್ವತವಾಗಿ ಮನ ದಾಳದಲ್ಲಿ ನೆಲೆಯೂರಲು ಸಾಧ್ಯ ಎಂದರು. ಸಾಹಿತ್ಯ ಲೋಕದಲ್ಲಿ ಸದ್ವಿಚಾರ, ಸದುದ್ದೇಶದಿಂದ ಕೂಡಿದಾಗ ಚಿರಕಾಲ ಉಳಿಯುತ್ತದೆ. ರಾಷ್ಟ್ರದಲ್ಲಿನ ರಾಜಮಹಾರಾಜರು, ಶ್ರೀಮಂತರು, ಹಣ ಗಳಿಸಿದವರನ್ನು ಜಗತ್ತು ಮರೆತಿದೆ. ಆದರೆ ಸಮಾಜಮುಖಿ…

Read More

ಶೃಂಗೇರಿ: ಶೃಂಗೇರಿ ಶಾರದಾಪೀಠದ ಶ್ರೀಶಾರದಾಮಹಾರಥೋತ್ಸವ ಬಲು ವಿಜೃಂಭಣೆಯಿಂದ ನೆರವೇರಿತು. ಜಗದ್ಗುರು ಶ್ರೀವಿಧುಶೇಖರಭಾರತೀ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನೆರವೇರಿದ ರಥೋತ್ಸವಕ್ಕೆ ಶ್ರೀಮಠದ ಆನೆಗಳು,ಛತ್ರಿ ಚಾಮರಗಳು,ವೇದ,ವಾದ್ಯಗೋಷ್ಠಿಗಳು,ರಂಗವಲ್ಲಿ ಚಿತ್ತಾರಗಳು,ತಳಿರು ತೋರಣಗಳು ಮೆರಗು ನೀಡಿದವು.ಮುಖ್ಯರಸ್ತೆಯಲ್ಲಿ ಸಾಗಿ ಬಂದ ರಥೋತ್ಸವದಲ್ಲಿ ನಾನಾಪ್ರಾಂತ್ಯಗಳಿಂದ ಆಗಮಿಸಿದ ಸದ್ಭಕ್ತರು ಭಾಗಿಯಾದರು.ಪಟ್ಟಣದ ಸದ್ಭಕ್ತರು ಜಗದ್ಗುರುಗಳಿಗೆ ಫಲಗಳನ್ನು ಸಮರ್ಪಿಸಿ ಧನ್ಯತಾಭಾವ ಪಡೆದರು. ಶ್ರೀ ಶಾರದಾಂಬಾ ರಥೋತ್ಸವ ಪ್ರಯುಕ್ತ ಶ್ರೀಶಾರದಾಪೀಠದಲ್ಲಿ ಫೆ.೧೧ರಿಂದ ಶ್ರೀಶಕ್ತಿಗಣಪತಿ ಸನ್ನಿಧಿಯಲ್ಲಿ ಪೂಜೆ,ವಿಶೇಷ ಪ್ರಾರ್ಥನೆ,ಧ್ವಜಾರೋಹಣ,ಮಂತ್ರಜಪ,ವೇದಪಾರಾಯಣಿ ಪ್ರಾರಂಭ,ಸಹಸ್ರಮೋದಕ ಗಣಹೋಮ,ಯಾಗಶಾಲಾ ಪ್ರವೇಶ,ಜಗದ್ಗುರುಗಳಿಂದ ಶತಚಂಡೀಯಾಗದ ಸಂಕಲ್ಪ,ಋತ್ವಿಜರಿಂದ ಚಂಡೀಪಾರಾಯಣಿ,ಕ್ಷೇತ್ರಪಾಲಕ ಬ್ರಹ್ಮ ಸನ್ನಿಧಿಯಲ್ಲಿ ವಿಶೇಷಪೂಜೆ,ಬ್ರಹ್ಮ ಸಂತರ್ಪಣೆ,ಶ್ರೀ ಶಾರದಾಮ್ಮನವರ ಬೀದಿ ಉತ್ಸವ,ಉತ್ಸವದಲ್ಲಿ ಶ್ರೀಮಲಹಾನಿಕರೇಶ್ವರ ದೇವಸ್ಥಾನದಿಂದ ಶ್ರೀಭವಾನಿ ಅಮ್ಮನವರು ಶ್ರೀ ಶಾರದಾಮ್ಮ ಸನ್ನಿಧಿಗೆ ಚಿತ್ತೈಸುವುದು,ಜಗದ್ಗುರುಗಳಿಂದ ಶ್ರೀಶಾರದೆಗೆ ವಿಶೇಷ ಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮ ಜರುಗಿತು. ಭಾನುವಾರ ಜಗದ್ಗುರುಗಳ ಉಪಸ್ಥಿತಿಯಲ್ಲಿ ಶತಚಂಡೀಯಾಗದ ಪೂರ್ಣಾಹುತಿ,ಓಕಳಿ ಉತ್ಸವ,ತೆಪ್ಪೋತ್ಸವ,ಬೀದಿ ಉತ್ಸವ ಹಾಗೂ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದೆ.ಸೋಮವಾರ ಮಹಾಸಂಪ್ರೋಕ್ಷಣೆ ನೆರವೇರಲಿದೆ. The Shree Sharada Maharathotsava of Sringeri Sharada Peetha was celebrated with great pomp and show.

Read More

ಚಿಕ್ಕಮಗಳೂರು: ಭರತ ಖಂಡದ ಚಾರಿತ್ರಿಕ ಪುರುಷ ಸಂತ ಸೇವಾಲಾಲ್ ಮಹಾರಾಜರು ಹಲವು ಪವಾಡಗಳ ಮೂಲಕ ಜನರ ಮನ ಗೆದ್ದವರು ಎಂದು ನಗರ ಸಭೆ ಅಧ್ಯಕ್ಷ್ಷೆ ಸುಜಾತ ಶಿವಕುಮಾರ್ ಹೇಳಿದರು. ಜಿಲ್ಲಾಡಳಿತದ ವತಿಯಿಂದ ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಸಂತ ಸೇವಾಲಾಲರು ಈಗಿನ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಬೆಳಗುತ್ತಿ ಹೋಬಳಿಯ ಸೂರಗೊಂಡನ ಕೊಪ್ಪ ಎಂಬಲ್ಲಿ ಜನಿಸಿದರು. ಸೇವಾಲಾಲರು ತಮ್ಮ ಲೀಲೆಗಳ ಹಾಗೂ ಪವಾಡಗಳ ಮೂಲಕ ಜನರ ಮನಸ್ಸಿನಲ್ಲಿ ಗುರುವಿನ ಸ್ಥಾನ ಪಡೆದಿದ್ದಾರೆ, ಜೀವನದುದ್ದಕ್ಕೂ ಬ್ರಹ್ಮಚಾರಿಯಾಗಿಯೇ ಉಳಿದವರು ಎಂದ ಅವರು ತಮ್ಮ ಜೀವನದ ಅನುಭವವನ್ನು ತಮ್ಮ ತತ್ವದ ಮೂಲಕ ಜನರಲ್ಲಿನ ಅಜ್ಞಾನವನ್ನು ದೂರ ಮಾಡಿದರು. ಸತ್ಯ, ಅಹಿಂಸೆ, ದಯೆ, ಕರುಣೆಗಳನ್ನು ಪಾಲಿಸುವ ಮೂಲಕ ಧರ್ಮಾತೀತರಾಗಿ ಎಂದು ಸಾರಿದ ಮಹಾಪುರುಷ ಎಂದು ಹೇಳಿದರು. ಬೇಲೂರು ರಸ್ತೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ. ಕೆ. ಶ್ರೀನಿವಾಸ್ ಉಪನ್ಯಾಸ ನೀಡಿ ಮಾನವ ಜನ್ಮ…

Read More

ಚಿಕ್ಕಮಗಳೂರು: ಶಾಸಕಾಂಗ ಹಾಗೂ ಕಾರ್ಯಾಂಗ ಸೇರಿ ಕಾರ್ಯನಿರ್ವಹಿಸಿದಲ್ಲಿ ಸರ್ಕಾರದ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸಲು ಸಹಕಾರಿಯಾಗುತ್ತವೆ. ಸರ್ಕಾರದ ಯೋಜನೆಗಳನ್ನು ಕ್ಷೇತ್ರದ ಪ್ರತಿಯೊಬ್ಬ ಸಾರ್ವಜನಿಕರಿಗೂ ತಲುಪಿಸಿ ಅವರ ಸಮಸ್ಯೆಗಳಿಗೆ ಸ್ಪಂಧಿಸಿ ಬಗೆಹರಿಸುವುದೇ ನನ್ನ ಕರ್ತವ್ಯ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು. ಶನಿವಾರ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿ ಲಕ್ಕಮ್ಮನಹಳ್ಳಿ ಮತ್ತು ಬಿಳೇಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಲಕ್ಕಮ್ಮನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಜನ ಸಂಪರ್ಕ ಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹಿಡಿದು ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಿಗೆ ಪ್ರತಿದಿನ ತಿರುಗಿದರು ಕೆಲವೊಮ್ಮೆ ಅಧಿಕಾರಿಗಳು ಸಂಪರ್ಕಕ್ಕೆ ಸಿಗದೇ ತಮ್ಮ ಸಮಸ್ಯೆಗಳನ್ನು ಅವರಲ್ಲಿ ವಿವರಿಸಲಾಗದೇ ಸಮಸ್ಯೆಗಳು ಬಗೆಹರಿಸಿಕೊಳ್ಳಲು ಕಷ್ಟಕರವಾಗುತ್ತದೆ ಎಂಬ ಉದ್ದೇಶದಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನ ಸಂಪರ್ಕ ಸಭೆಯನ್ನು ಆಯೋಜಿಸಿ ಅಧಿಕಾರಿಗಳೆ ಸ್ವತಹ ಜನ ಸಾಮಾನ್ಯರ ಮನೆ ಬಾಗಿಲಿಗೆ ಬಂದು ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಕಾರ್ಯಕ್ರಮ ಉತ್ತಮ ವೇಧಿಕೆಯಾಗಿದೆ ಎಂದರು. ಈ ಜನ…

Read More

ಚಿಕ್ಕಮಗಳೂರು:  ಯಾವುದೇ ಅಧಿಕಾರಿ ಸಾರ್ವಜನಿಕರೊಂದಿಗೆ ಸಂಪರ್ಕದಲಿದ್ದು ಉತ್ತಮ ಭಾಂದವ್ಯ ಹೊಂದಿದ್ದರೆ ವ್ಯವಸ್ಥಿತವಾದ ಕರ್ತವ್ಯ ಸುಲಭ ರೀತಿಯಲ್ಲಿ ನಿರ್ವವಹಿಸಬಹುದು ಎಂದು. ಇಂಡಸ್ಟ್ರಿಯಲ್ ಏರಿಯಾ ಸಾಮಿಲ್ ಮಾಲೀಕರು ಮತ್ತು ಬಾಡಿಗೆದಾರರ ಸಂಘ ಅಧ್ಯಕ್ಷ ಸುರೇಂದ್ರ ಶೆಟ್ಟಿ ಹೇಳಿದರು. ಗೌಡನಹಳ್ಲೀಯ ಚೌಡೇಶ್ವರ ದೇವಸ್ಥಾನದ ಆವರಣದಲ್ಲಿ ಇಂಡಸ್ಟ್ರಿಯಲ್ ಏರಿಯಾ ಸಾಮಿಲ್ ಮಾಲೀಕರು ಮತ್ತು ಬಾಡಿಗೆದಾರರ ಸಂಘ ವತಿಯಿಂದ ಆಯೋಜಿಸಿದ್ದ ನಿವೃತ್ತಿ ಅಗಲಿರುವ ಉಪ ವಲಯ ಅರಣ್ಯ ಅಧಿಕಾರಿ ಕೆಕೆ ರಮೇಶ್ ಅವರಿಗೆ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು ಅರಣ್ಯ ಅಧಿಕಾರಿಗಳು ವಿನಹ ಕಾರಣ ಸಾರ್ವಜನಿಕರಿಗೆ ತೊಂದರೆ ನೀಡದೆ ಕಾನೂನು ರೀತಿಯ ಕ್ರಮಗಳನ್ನು ಅನುಸರಿಸಿ ಅರಣ್ಯ ರಕ್ಷಣೆ ಕಾರ್ಯದಲ್ಲಿ ತೊಡಗಿಕೊಳ್ಳ ಬೇಕು.ಅರಣ್ಯ ಅಧಿಕಾರಿ ಜೆ.ಕೆ ರಮೇಶ್ ರವರು ೨೦೧೯ ರಲ್ಲಿ ಈ ಭಾಗದ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಎಲ್ಲಾ ಸಾಮಿಲ್ ಮಾಲೀಕರೊಂದಿಗೆ ಉತ್ತಮ ಭಾಂದವ್ಯ ಬೆಳೆಸಿಕೊಂಡು ನಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸಿ ಕೊಡುವುದರೊಂದಿಗೆ ಅರಣ್ಯ ರಕ್ಷಣಾ ಕಾರ್ಯದಲ್ಲು ಮುಂಚುಣಿಯಲ್ಲಿದ್ದರು ಇಂತಹ ದಕ್ಷ ಅಧಿಕಾರಿಗಳು ಜನ…

Read More

ಚಿಕ್ಕಮಗಳೂರು: ಜಲ್ ಜೀವನ್ ಮಿಷನ್ ಯೋಜನೆಯಡಿ ಮೊದಲು ನೀರಿನ ಮೂಲವನ್ನು ಗುರುತಿಸದೆ ಪೈಪ್‌ಲೈನ್, ಟ್ಯಾಂಕ್ ನಿರ್ಮಾಣ ಇನ್ನಿತರೆ ಕಾಮಗಾರಿಗಳನ್ನು ಕೈಗೊಂಡರೆ ಜಿಲ್ಲಾಧಿಕಾರಿಗಳ ಮೂಲಕ ಸಂಬಂಧಪಟ್ಟ ಇಂಜಿನೀಯರ್ ಮತ್ತು ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಎಚ್ಚರಿಸಿದರು. ಅವರು ಶುಕ್ರವಾರ ಚಿಕ್ಕಮಗಳೂರು ಪ್ರೆಸ್ ಕ್ಲಬ್ ವತಿಯಿಂದ ನಡೆದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮ ಪ್ರತಿನಿಧಿಗಳ ಜೊತೆ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿ  ಬಹಳಷ್ಟು ಕಡೆ ನೀರಿನ ಮೂಲವೇ ಇಲ್ಲದಿದ್ದರೂ ಪೈಪ್‌ಲೈನ್ ಕಾಮಗಾರಿ ಮಾಡಿ, ನಲ್ಲಿಗಳನ್ನೂ ಅಳವಡಿಸಲಾಗಿದೆ. ಕಾಮಗಾರಿ ಬಿಲ್ ಪಾವತಿ ಆಗಿದ್ದರೂ ನೀರು ಮಾತ್ರ ಪೂರೈಕೆ ಆಗುತ್ತಿಲ್ಲ ಎನ್ನುವ ದೂರುಗಳಿರುವ ಬಗ್ಗೆ ಪ್ರತಿಕ್ರಿಯಿಸಿದರು. ಯೋಜನೆ ಆರಂಭಿಸುವ ಮುನ್ನ ಗ್ರಾ.ಪಂ.ಗಮನಕ್ಕೆ ತರಬೇಕು. ಇಂಜಿನೀಯರುಗಳು ಹೇಳಿದ ರೀತಿ ಗುತ್ತಿಗೆದಾರರು ಕೆಲಸ ಮಾಡಬೇಕು. ಈ ಸಂದರ್ಭದಲ್ಲಿ ನೀರಿನ ಮೂಲವನ್ನು ಮೊದಲು ಖಾತ್ರಿಪಡಿಸಿಕೊಂಡು ಉಳಿದೆಲ್ಲ ಕಾಮಗಾರಿ ಕೈಗೊಳ್ಳಬೇಕು ಇಲ್ಲವಾದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಲಾಗಿದೆ. ಈಗ ದೂರುಗಳು ಕಡಿಮೆಯಾಗಿವೆ ಎಂದು…

Read More